The Centre for Internet and Society
http://editors.cis-india.org
These are the search results for the query, showing results 61 to 75.
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ
http://editors.cis-india.org/a2k/blogs/cb5cbfc95cbfcaaca1cbfcaf-ca4cb0cacca4cbf-ce8ce6ce7cee-cb0cbec82c9acbf-1
<b>ಕನ್ನಡ ವಿಕಿಪೀಡಿಯನ್ನರಾದ ವಿಕಾಸ್ ಹೆಗಡೆ ಅವರು Wiki Advanced Training 2018ರ ತಮ್ಮ ಅನುಭವ ಮತ್ತು ಕಲಿತ ವಿಚಾರಗಳನ್ನು ಈ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.</b>
<p> </p>
<p>ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು ನಾನು ಕನ್ನಡ ವಿಕಿಪೀಡಿಯಾಗೆ ಮಾಹಿತಿ ತುಂಬುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ವಿಕಿಗೆ ಸಾಮಾನ್ಯವಾಗಿ ಮಾಹಿತಿ ತುಂಬಿಸಲು ಬೇಸಿಕ್ ಮಟ್ಟದ ಎಡಿಟಿಂಗ್ ತಿಳುವಳಿಕೆ ಸಾಕಾಗುತ್ತದೆ. ಆದರೆ ಹಾಗೇ ಮುಂದುವರೆಯುತ್ತಾ ಹೋದಂತೆ ಅದರಲ್ಲಿ ಕಲಿಯಲು ಮತ್ತು ತಿಳಿದುಕೊಳ್ಳಲು ಬಹಳಷ್ಟಿರುತ್ತದೆ. ಉತ್ತಮ ಗುಣಮಟ್ಟದ ಲೇಖನಗಳನ್ನು, ಪುಟಗಳನ್ನು ತಯಾರಿಸಲು ಹಲವು ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕುದಾಗಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ. ಅನೇಕ ವಿಷಯಗಳಿಗೆ ಒಂದು ಮಟ್ಟದ ತಾಂತ್ರಿಕ ಜ್ಞಾನ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಅಗತ್ಯ.</p>
<p>ವಿಕಿಪೀಡಿಯಾಗೆ ಸಂಬಂಧಿಸಿದಂತೆ ತರಬೇತಿ, ಸಮುದಾಯ ಕಟ್ಟುವಿಕೆ ಮುಂತಾದ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ-A2K ವಿಭಾಗವು ಈ ಮುಂದುವರೆದ ವಿಕಿಪೀಡಿಯ ತರಬೇತಿ ಬಗ್ಗೆ ಹಿಂದಿನ ತಿಂಗಳು ಘೋಷಣೆ ಮಾಡಿತ್ತು. ಇದು ಮೂರು ದಿನಗಳ ಕಾಲ ನಡೆಯುವ ತರಬೇತಿಯಾಗಿದ್ದು ಎಲ್ಲಾ ಭಾರತೀಯ ಭಾಷೆಗಳ ವಿಕಿಪೀಡಿಯರನ್ನ ಆಹ್ವಾನಿಸಲಾಗಿತ್ತು. ಹಿಂದೆ ಕೆಲಬಾರಿ ಬೇರೆಬೇರೆ ಸ್ಥಳಗಳಲ್ಲಿ ಈ ಮುಂದುವರೆದ ತರಬೇತಿಗಳು ನಡೆದಿದ್ದರೂ ಸಹ ನನಗೆ ಹೋಗಲು ಆಗಿರಲಿಲ್ಲ. ಈ ಬಾರಿ ತಾರೀಖುಗಳು ಹೊಂದಾಣಿಕೆಯಾಗುತ್ತಿದ್ದುದರಿಂದ ನಾನು ಕೂಡ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಕೆ ಮತ್ತು ಆಯ್ಕೆಗೆ ವಿಕಿಪೀಡಿಯಾಗೆ ನಾವು ಮಾಡಿದ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿದ್ದವು. ಕನ್ನಡ ಸಮುದಾಯದಿಂದ ನಾನು ಮತ್ತು ಮಲ್ಲಿಕಾರ್ಜುನ್ ಆಯ್ಕೆಯಾಗಿರುವುದಾಗಿ ಕೆಲದಿನಗಳ ನಂತರ ತಿಳಿಸಿದರು.</p>
<p>ಈ ಬಾರಿ ಈ ತರಬೇತಿಯನ್ನು ’ರಾಂಚಿ’ಯಲ್ಲಿ ನಡೆಸಲು ಕಾರಣವಿತ್ತು. ಮೊದಲನೆಯದಾಗಿ, ವಿಕಿಪೀಡಿಯಾಗೆ ಬಹಳ ಕೆಲಸ ಮಾಡಿ, ಭಾರತದ ಉತ್ತಮ ವಿಕಿಮೀಡಿಯನ್ ಎಂದು ಗುರುತಿಸಲ್ಪಟ್ಟಿದ್ದ ’ಗಂಗಾಧರ ಭದಾನಿ’ಯವರು ರಾಂಚಿಯವರಾಗಿದ್ದು ಈ ವರ್ಷ ಜನವರಿಯಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ರಾಂಚಿಯಲ್ಲಿ ಆಯೋಜನೆಯಾಗಿತ್ತು. ಎರಡನೆಯದಾಗಿ ಭಾರತದ ಪೂರ್ವಭಾಗದಲ್ಲಿ ವಿಕಿಚಟುವಟಿಕೆಗಳನ್ನು ನಡೆಸುವ ಉದ್ದೇಶವೂ ಇತ್ತು. ಜೂನ್ ೨೮ನೇ ತಾರೀಖು ಬೆಂಗಳೂರಿಂದ ಹೊರಟು ರಾಂಚಿಯನ್ನು ತಲುಪಿದೆವು. ವಿಮಾನ ನಿಲ್ದಾಣದಿಂದ ಎಂಟು ಕಿಮೀ ದೂರದಲ್ಲಿರುವ ’ಲೇ ಲ್ಯಾಕ್ ಸರೋವರ್ ಪೋರ್ಟಿಕೊ’ ಹೋಟೆಲ್ ತಲುಪಿದೆವು. ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ಸಂಸ್ಕೃತ, ಒಡಿಯಾ, ಇಂಗ್ಲೀಷ್ ವಿಕಿಪೀಡಿಯನ್ನರೂ ಸೇರಿ ಒಟ್ಟು ಮೂವತ್ತು ಜನ ಬಂದಿದ್ದರು. ಅಂದು ಸಂಜೆ ಪೂರ್ವಭಾವಿ ಸೆಶನ್ ಇತ್ತು. ಪರಸ್ಪರ ಪರಿಚಯ, ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ, ಕಾರ್ಯಸೂಚಿ ಇತ್ಯಾದಿಗಳನ್ನು ಕೊಡಲಾಯಿತು.</p>
<p>ಮಾರನೆಯ ದಿನ ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ತರಬೇತಿಯು ನಡುವಿನ ಚಹಾ ವಿರಾಮ ಮತ್ತು ಊಟದ ವಿರಾಮದೊಂದಿಗೆ ಸಂಜೆಯವರೆಗೂ ನಡೆಯಿತು. ವಿಕಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ, ಟೂಲ್ ಗಳ ಬಗ್ಗೆ ತಿಳಿಸಿಕೊಡಲಾಯಿತು. ಬೇರೆ ಬೇರೆ ಭಾಷೆಯ ವಿಕಿಪೀಡಿಯನ್ನರು ಅವರ ಭಾಷೆಯ ವಿಕಿಪೀಡಿಯಾಗಳ ಬಗ್ಗೆ, ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಂಡರು. ಹಿರಿಯ ವಿಕಿಪೀಡಿಯನ್ನರಾಗಿದ್ದ ಗಂಗಾಧರ ಬದಾನಿಯವರ ಕುಟುಂಬವನ್ನು ಸಂಜೆ ಆಹ್ವಾನಿಸಲಾಗಿತ್ತು. ಭದಾನಿಯವರ ಸ್ಮರಣಾರ್ಥವಾಗಿ ಒಂದು ಚಿಕ್ಕ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು. ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಅವರು ಮಾಡಿದ ಎಡಿಟ್ ಎಣಿಕೆ ಎರಡೂವರೆ ಲಕ್ಷಕ್ಕೂ ಮೀರಿದ್ದು ಆ ವಯಸ್ಸಿನಲ್ಲಿ ಅವರು ಸಲ್ಲಿಸಿದ ಕಾಣಿಕೆ ಮತ್ತು ಅನೇಕ ಕಿರಿಯ ವಿಕಿಪೀಡಿಯನ್ನರಿಗೆ ಕೊಟ್ಟ ಪ್ರೋತ್ಸಾಹಗಳನ್ನು ನೆನಪಿಸಿಕೊಳ್ಳಲಾಯಿತು. </p>
<p>ಮೊದಲ ದಿನದ ತರಬೇತಿಯಲ್ಲಿ ಸಮಯದ ಅಭಾವದಿಂದ ಎರಡ್ಮೂರು ವಿಷಯಗಳು ಬಿಟ್ಟುಹೋದದ್ದರಿಂದ ಅನಂತರದ ದಿನ ಬೆಳಗ್ಗೆ ಒಂಬತ್ತು ಗಂಟೆಗೇ ಸೇರಿದೆವು. ಅಂದು ಕೂಡ ಹಲವು ತರಬೇತಿ ಮತ್ತು ಮಾಹಿತಿ ಸೆಶನ್ ಗಳು ನಡೆದವು. ಆಯಾ ವಿಕಿಪೀಡಿಯನ್ನರು ತಮ್ಮ ಭಾಷೆಯ ವಿಕಿಗಾಗಿ ಮುಂದೆ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪ್ರೆಸೆಂಟ್ ಮಾಡಲು ಹೇಳಲಾಯಿತು. ಕನ್ನಡ ವಿಕಿಪೀಡಿಯಕ್ಕಾಗಿ ಹಾಕಿಕೊಳ್ಳಬಹುದಾದ ಯೋಜನೆಯ ಬಗ್ಗೆ ನಾವು ಪ್ರೆಸೆಂಟ್ ಮಾಡಿದೆವು. ಕೆಲವು hands on activityಗಳು ನಡೆದವು.</p>
<p>ಕೊನೆಯ ದಿನದ ತರಬೇತಿ ಅರ್ಧ ದಿನಕ್ಕೆ ಮಾತ್ರ ಸೀಮಿತವಾಗಿದ್ದು ಒಂದೆರಡು ವಿಷಯಗಳ ಮಾಹಿತಿ ಹಂಚಿಕೆ ನಡೆಯಿತು. ಎರಡು ದಿನಗಳಲ್ಲಿ ನಡೆದ ತರಬೇತಿಯ ವಿಷಯಗಳ ಬಗ್ಗೆ ಮೆಲುಕು, ಬೇಕಾದಲ್ಲಿ ಹೆಚ್ಚಿನ ಮಾಹಿತಿ, ಮುಂದಿನ ಯೋಜನೆಗಳ ಬಗ್ಗೆ ಮಾತುಕತೆ, ಅಭಿಪ್ರಾಯ, ಹಿನ್ನುಣಿಕೆಗಳನ್ನು ಹಂಚಿಕೊಳ್ಳಲಾಯಿತು.</p>
<p>ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ವಿಕಿಪೀಡಿಯನ್ನರು ಮಧ್ಯಾಹ್ನ ವಾಪಸ್ ಹೊರಟರು. ನಾವು ಕೂಡ ಎರಡು ಗಂಟೆಗೆ ಅಲ್ಲಿಂದ ಹೊರಟು ನಾಲ್ಕೂ ಇಪ್ಪತ್ತರ ವಿಮಾನದಲ್ಲಿ ಸಂಜೆ ಆರೂವರೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ಭಾರತದ ವಿವಿಧ ಭಾಗಗಳ, ಬೇರೆ ಬೇರೆ ಭಾಷೆಗಳ ವಿಕಿಪೀಡಿಯರೊಡನೆ ಸಂವಾದ, ಹಲವು ಹೊಸ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು, ಕಲಿತುಕೊಂಡಿದ್ದು, ತೆಲುಗು, ತಮಿಳಿನ ಹಿರಿಯ ವಿಕಿಪೀಡಿಯನ್ನರ ಭೇಟಿಗಳು ಒಟ್ಟಾರೆ ಒಳ್ಳೆಯ ಅನುಭವ, ಖುಷಿ ಕೊಟ್ಟಿತು. ಕನ್ನಡ ವಿಕಿಮೀಡಿಯ ಯೋಜನೆಗಳಿಗೆ ಹೆಚ್ಚಿನ ಕೆಲಸ ಮಾಡಲು ಈ ತರಬೇತಿ ಶಿಬಿರವು ಉತ್ಸಾಹ ತುಂಬಿತು.</p>
<p> </p>
<hr />
<p style="text-align: justify;"> </p>
<p style="text-align: justify;"><a class="external-link" href="http://vikasavada.blogspot.com/2018/07/blog-post.html?m=1">Link to Vikas Hegde's blogpost</a></p>
<p>
For more details visit <a href='http://editors.cis-india.org/a2k/blogs/cb5cbfc95cbfcaaca1cbfcaf-ca4cb0cacca4cbf-ce8ce6ce7cee-cb0cbec82c9acbf-1'>http://editors.cis-india.org/a2k/blogs/cb5cbfc95cbfcaaca1cbfcaf-ca4cb0cacca4cbf-ce8ce6ce7cee-cb0cbec82c9acbf-1</a>
</p>
No publisherVikas HegdeWikipediansSpeakKannada WikipediaWiki Advanced TrainingAccess to Knowledge2018-07-04T17:02:46ZBlog Entryಭಾಷಣದಿಂದ ಭಾಷೆ ಉಳಿಯಲ್ಲ, ಕನ್ನಡದಲ್ಲೇ ಮಾಹಿತಿ ಸಿಗುವುದು ಅಗತ್ಯ: ಪವನಜ
http://editors.cis-india.org/openness/news/just-kannada-november-23-2014-kannada-wikipedia-presentation-coverage
<b>Media coverage of Kannada Wikipedia presentation at Mysuru on November 23, 2014. </b>
<p>The article was <a class="external-link" href="http://www.justkannada.in/pavanaja-u-b-kannada-use-more/">published in Just Kannada</a> on November 23, 2014.</p>
<hr />
<p style="text-align: justify; ">ಮೈಸೂರು, ನ.23 : ಧ್ವಜ ಹಾರಿಸಿ ಭಾಷಣ ಮಾಡಿದರೆ ಕನ್ನಡ ಭಾಷೆ ಉಳಿಯುವುದಿಲ್ಲ. ಬದಲಿಗೆ ಕನ್ನಡಲ್ಲೇ ಎಲ್ಲಾ ಮಾಹಿತಿಗಳು ಸಿಗುವಂತೆ ಮಾಡುವುದು ಅಗತ್ಯವಿದೆ ಎಂದು ಬೆಂಗಳೂರಿನ ಭಾರತೀಯ ಭಾಷೆಗಳು, ಸಮಾಜ ಮತ್ತು ಅಂತರ್ಜಾಲ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕ ಡಾ.ಯು.ಬಿ.ಪವನಜ ತಿಳಿಸಿದರು.</p>
<p style="text-align: justify; ">ವಿಸ್ಮಯ ಫೌಂಡೇಶನ್ ಭಾನುವಾರ ಕುವೆಂಪುನಗರದ ಉದಯರವಿ ರಸ್ತೆ ಕಲಾಸುರುಚಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಕನ್ನಡ ವಿಕಿಪಿಡಿಯ: ಒಂದು ಪರಿಚಯ’ ಕುರಿತು ಮಾತನಾಡಿದರು.<br /> ಕನ್ನಡ ವಿನಾಶದ ಹಾದಿಯತ್ತ ಸಾಗುತ್ತಿದೆ. ಇಂದು ಕೇವಲ ಕಥೆ, ಕಾದಂಬರಿಗಳಿಂದ ಮಾತ್ರ ಕನ್ನಡ ಉಳಿಯುವುದಿಲ್ಲ ವಿಕಿಪೀಡಿಯದಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಧ್ವಜ ಹಾರಿಸಿ, ಭಾಷಣ ಮಾಡಿದರೆ ಕನ್ನಡ ಉಳಿಯುವುದಿಲ್ಲ. ಬದಲಾಗಿ ಅಗತ್ಯ ಮಾಹಿತಿಗಳು ಕನ್ನಡದಲ್ಲೇ ಸಿಕ್ಕಿದರೆ ಕನ್ನಡ ಉಳಿಯುತ್ತದೆ ಎಂದರು. ದೇಶ-ವಿದೇಶಗಳ ಭಾಷೆ, ಸಂಸ್ಕೃತಿಗಳ ಬಗ್ಗೆ ತಿಳಿದು ಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಕನ್ನಡ ಮಾಹಿತಿ ಸಾಹಿತ್ಯ ಕಡಿಮೆ ಇದೆ. ಕನ್ನಡಿಗರು ಕನ್ನಡ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹುಡುಕುವ ಮುನ್ನವೇ ಅಗತ್ಯ ಮಾಹಿತಿ ಒದಗಿಸಿದರೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.</p>
<p style="text-align: justify; ">ಭಾರತೀಯ ವಿಕಿಪಿಡಿಯದಲ್ಲಿ 20ಕ್ಕೂ ಹೆಚ್ಚು ಭಾಷೆಗಳಿವೆ. ತಿಂಗಳಿಗೆ 50 ಕೋಟಿ ಹೊಸ ವೀಕ್ಷಕರು ಭೇಟಿ ನೀಡುತ್ತಾರೆ. ಇದರಲ್ಲಿ ಏಳು ಸಾವಿರ ಸಂಪಾದಕರಿದ್ದಾರೆ. ಜೊತೆಗೆ ಇದೇ ಮಾದರಿಯಲ್ಲಿ ಜೂ.2003ರಲ್ಲಿ ಕನ್ನಡ ವಿಕಿಪಿಡಿಯ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ 18 ಸಾವಿರ ಲೇಖನಗಳು, 622 ಸಂಪಾದಕರು ಇದ್ದಾರೆ. ಅದರಲ್ಲಿ 22 ಮಂದಿ ಸಕ್ರಿಯ ಸಂಪಾದಕರು ಹಾಗೂ ನಾಲ್ಕು ಮಂದಿ ಅತಿ ಸಕ್ರಿಯ ಸಂಪಾದಕರಿದ್ದಾರೆ. ತಿಂಗಳಿಗೆ 18.50 ಲಕ್ಷ ಜನ ಕನ್ನಡ ವಿಕಿಪಿಡಿಯ ಪುಟ ವೀಕ್ಷಣೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.</p>
<p style="text-align: justify; ">ನಾವಷ್ಟೇ ಅಲ್ಲ ಲಕ್ಷಾಂತರ ಮಂದಿ ತಂತ್ರಜ್ಞಾನ(ವಿಕಿಪಿಡಿಯ, ಅಂತರ್ಜಾಲ)ಕ್ಕೆ ಹೊಂದಿಕೊಂಡಿದ್ದಾರೆ. ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ವಿಕಿಪಿಡಿಯದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶಕ್ಕೆ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು ಎಂದ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಅನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪೀಡಿಯವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.</p>
<p style="text-align: justify; ">ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್ವಿಯಸ್ ಸುಂದರಂ ಮಾತನಾಡಿ, ಒಂದು ಸಾವಿರ ವರ್ಷಗಳಿಂದ ಒಂದು ವರ್ಷವೂ ಎಡಬಿಡದೆ ಬರೆಯುತ್ತಿರುವ, ಕಲಿಯುತ್ತಿರುವ ಭಾಷೆ ಕನ್ನಡ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಒಂದೊಂದು ಶತಮಾನದವರೆಗೂ ಕನ್ನಡ ಸಾಹಿತ್ಯ ಅವಿಚ್ಛಿನ್ನವಾಗಿ ಇದೆ. ಇಂತಹ ಭಾಷೆಯ ಬಗ್ಗೆ ನಿರಂತರವಾಗಿ ಪ್ರಚಾರ ಮಾಡಬೇಕು. ಹಾಗೆಯೇ ಆಯಾಯ ಪ್ರದೇಶದಲ್ಲಿ ನೆಲೆಸಿರುವವರು ಅಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತುಕೊಳ್ಳಬೇಕು ಎಂದು ಮನವಿ ಮಾಡಿದರು.</p>
<p style="text-align: justify; ">ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಡಾ.ಹಾ.ತಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಫೌಂಡೇಶನ್ ಸಂಸ್ಥಾಪಕ ಸೋಮಶೇಖರ್ ಇದ್ದರು.</p>
<p>
For more details visit <a href='http://editors.cis-india.org/openness/news/just-kannada-november-23-2014-kannada-wikipedia-presentation-coverage'>http://editors.cis-india.org/openness/news/just-kannada-november-23-2014-kannada-wikipedia-presentation-coverage</a>
</p>
No publisherpraskrishnaOpennessKannada WikipediaAccess to Knowledge2014-12-06T02:30:29ZNews Itemಬೆಳ್ತಂಗಡಿ:ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶ ವಿಕಿಪೀಡಿಯಾ-ಪವನಜ
http://editors.cis-india.org/openness/news/sahil-online-august-14-2015
<b>The Centre for Internet & Society (CIS-A2K) has ongoing partnership with SDM College, Ujire. Students of Masters in Communication and Journalism will be writing articles in Kannada Wikipedia. This academic year’s programme was inaugurated on August 12. It was followed by hands-on workshop. SahilOnline has reported this on August 14, 2015.</b>
<p style="text-align: justify; ">Read the online entry published by <a class="external-link" href="http://www.sahilonline.in/dakshana-kannada/%E0%B2%AC%E0%B3%86%E0%B2%B3%E0%B3%8D%E0%B2%A4%E0%B2%82%E0%B2%97%E0%B2%A1%E0%B2%BF%E0%B2%8E%E0%B2%B2%E0%B3%8D%E0%B2%B2%E0%B2%BE-%E0%B2%95%E0%B2%BE%E0%B2%B2%E0%B2%95%E0%B3%8D%E0%B2%95%E0%B3%82/#.VewsF318hQp">SahilOnline</a> on August 14, 2015.</p>
<hr />
<p style="text-align: justify; ">ಬೆಳ್ತಂಗಡಿ: ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದೆ. ಉಪಯುಕ್ತ ಬರವಣಿಗೆಗಳ ಕೋಶವನ್ನು ಹೊಂದಿದ ಇದನ್ನು ಯಾರು ಬೇಕಾದರೂ ಮುಕ್ತವಾಗಿ ಬಳಸಬಹುದು ಎಂದು ಪತ್ರಿಕಾ ಅಂಕಣಕಾರ ಬೆಂಗಳೂರಿನ ಡಾ. ಯು. ಬಿ. ಪವನಜ ಹೇಳಿದರು.<br />ಅವರು ಗುರುವಾರ ಉಜಿರೆ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.<br /><br />2001ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಗೊಂಡ ವಿಕಿಪಿಡಿಯಾ ಪ್ರಪಂಚದ 290 ಭಾಷೆಗಳಲ್ಲಿ ಲಭ್ಯ ಇದೆ. ದೇಶದ 20 ಭಾಷೆಗಳಲ್ಲಿ ಲೇಖನಗಳನ್ನು ಒಳಗೊಂಡಿದೆ. 2003ರಲ್ಲಿ ಕನ್ನಡದಲ್ಲಿಯೂ ವಿಕಿಪಿಡಿಯಾ ಬರವಣಿಗೆ ಪ್ರಾರಂಭವಾಗಿದೆ. ಕೇವಲ 20 ಸಾವಿರ ಲೇಖನಗಳು ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕಡಿಮೆ ಅನ್ನಿಸುತ್ತದೆ. ಕನ್ನಡದಲ್ಲಿ ಪ್ರಬುದ್ಧತೆಯ ಬರವಣಿಗೆ ಶೈಲಿಯನ್ನು ಸುಧಾರಿಸಿಕೊಳ್ಳಲು ಇದೊಂದು ಸುಲಭದ ಮಾಧ್ಯಮ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಮತ್ತು ಕೌಶಲ ಬೆಳೆಸಿಕೊಳ್ಳಬೇಕು ಎಂದರು.<br /><br />ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ. ಮಾಹಿತಿ ಸಂಗ್ರಹದೊಂದಿಗೆ ಕ್ರೋಢೀಕರಣ ಮತ್ತು ಉಲ್ಲೇಖವೂ ಅಗತ್ಯ. ಗೂಗಲ್ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಮಾತ್ರ ಅದು ಸೂಚಿಸುತ್ತದೆ. ಯಾವುದೇ ಪ್ರಕರಣ ಘಟಿಸಿದ ತಕ್ಷಣ ವಿಕಿಪಿಡಿಯಾದಲ್ಲಿ ಅದು ನವೀಕರಣ ಆಗುತ್ತದೆ. ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಮಾಹಿತಿ ಸಂಗ್ರಹಿಸಬೇಕು. ಭಾಷೆ ಬಳಸಿದಾಗ ಅದು ಬೆಳೆಯುತ್ತದೆ ಹಾಗೂ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.<br /><br />ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅರಹಂತ ಸ್ವಾಗತಿಸಿ, ಚೇತನ್ ಕಾರ್ಯಕ್ರಮ ನಿರ್ವಹಿಸಿದರು.</p>
<p>
For more details visit <a href='http://editors.cis-india.org/openness/news/sahil-online-august-14-2015'>http://editors.cis-india.org/openness/news/sahil-online-august-14-2015</a>
</p>
No publisherpavanajaAccess to KnowledgeWikimediaWikipediaOpennessKannada Wikipedia2015-09-06T12:09:51ZNews Itemನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ
http://editors.cis-india.org/openness/blog-old/kannada-work-released-under-cc-by-sa
<b>ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.</b>
<p style="text-align: justify; ">The article by Omshivaprakash and Tejas Jain was published in <a class="external-link" href="http://blog.shivu.in/2014/11/cc-by-sa-40.html">ನನ್ ಮನ</a> on November 1, 2014.</p>
<hr />
<p style="text-align: justify; "><span>ನಿರಂಜನ (೧೯೨೪-೧೯೯೨) , ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.</span></p>
<p style="text-align: justify; "><span><span>ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲೇಖಕನ ಕೃತಿಗಳ ಅತಿ ದೊಡ್ಡ ಸಂಗ್ರಹವಾಗಿರಬಹುದು. ಇದನ್ನು ಆಚರಿಸಲು ಒಂದು ಔಪಚಾರಿಕ ಕಾರ್ಯಕ್ರಮವನ್ನು, ಕ್ರಿಯೇಟೀವ್ ಕಾಮನ್ಸ್ ಪಾಮುಖ್ಯತೆಯ ಬಗ್ಗೆ ಒಂದು ಅಭಿಶಿಕ್ಷಣದ ಜೊತೆಯಲ್ಲಿ ೨೦೧೪ನೇ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ನೆಡೆಸಲು ಯೋಚಿಸುತ್ತಿದ್ದೇವೆ. ಕಾರ್ಯಕ್ರಮದ ಕರಾರುವಾಕ್ಕಾದ ವಿವರಗಳನ್ನು ಸಧ್ಯದಲ್ಲೇ ಹಚಿಕೊಳ್ಳಲಾಗುವುದು.ಕನ್ನಡ ವಿಕಿಪೀಡಿಯ ಬಳಗ ಮತ್ತು ಸಿಐಎಸ್-ಎ೨ಕೆಯು ನಿಮ್ಮನ್ನು ಸಮಾರಂಭದಲ್ಲಿ ನೋಡಲು ಸಂತಸಪಡುತ್ತದೆ. ಕೆಳಗಿನ ಪುಸ್ತಕಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲು ಸಿಐಎಸ್-ಎ೨ಕೆಯ ಸಲಹೆಗಾರರೂ ಆಗಿರುವ <b>ತೇಜಸ್ವಿನಿ ನಿರಂಜನ</b>ರ ಮಹತ್ತರವಾದ ಆರಂಭಿಕ ಕೆಲಸವನ್ನು ನಾವು ಸ್ಮರಿಸುತ್ತೇವೆ.</span></span></p>
<p style="text-align: justify; "><span><span><span><b>ಲೇಖನದ ಕನ್ನಡ ಅನುವಾದ</b><span>: ತೇಜಸ್ ಜೈನ್ </span></span> </span></span></p>
<div dir="ltr"><span><span><b>ಚಿತ್ರ, ಇನ್ಫೋಬಾಕ್ಸ್ ಮತ್ತು ಇತರೆ ಮಾಹಿತಿ ಮೂಲ</b>: <a href="https://kn.wikipedia.org/wiki/%E0%B2%A8%E0%B2%BF%E0%B2%B0%E0%B2%82%E0%B2%9C%E0%B2%A8" target="_blank">ಕನ್ನಡ ವಿಕಿಪೀಡಿಯ</a></span></span></div>
<hr />
<h3><span><span>About the Authors</span></span></h3>
<p><span><span>OmShivaprakash and Tejas Jain are long time Kannada Wikimedians and enthusiasts of free and open knowledge in Kannada. <br /></span></span></p>
<p>
For more details visit <a href='http://editors.cis-india.org/openness/blog-old/kannada-work-released-under-cc-by-sa'>http://editors.cis-india.org/openness/blog-old/kannada-work-released-under-cc-by-sa</a>
</p>
No publisherOmshivaprakash and Tejas JainCreative CommonsAccess to KnowledgeWikimediaWikipediaOpennessKannada Wikipedia2014-11-03T15:04:23ZBlog Entry ತರಬೇತಿ ಮಾಡಲು ತರಬೇತಿಗೊಂಡಾಗ.... CIS-A2K TTT 2016
http://editors.cis-india.org/a2k/blogs/ca4cb0cacca4cbf-caecbeca1cb2cc1-ca4cb0cacca4cbfc97c82ca1cbec97-cis-a2k-ttt-2016
<b>Dhanalakshmi, a student from St Agnes College, Mangaluru, who was a participant of TTT 2016 has blogged her experience at Train-the-Trainer 2016 event organized by the Centre for Internet & Society earlier this year. </b>
<div>
<blockquote class="tr_bq"><span><b>ದಿ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿ</b>ಯವರು ಬೆಂಗಳೂರಿನಲ್ಲಿ ಜೂನ್ ೧೫ ರಿಂದ ೧೭, ೨೦೧೬ ರ ತನಕ ತರಬೇತುದಾರರ ತರಬೇತಿ (<a href="https://meta.wikimedia.org/wiki/CIS-A2K/Events/Train_the_Trainer_Program/2016" target="_blank">Train The Trainer</a>) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತ್ತು. ನನ್ನ ಅನುಭವವನ್ನು ಚಿಕ್ಕದಾಗಿ ಇಲ್ಲಿ ದಾಖಲಿಸುತ್ತಿದ್ದೇನೆ</span></blockquote>
</div>
<p style="text-align: justify; ">ಗೂಡಿನಲ್ಲಿದ್ದ ನನ್ನನ್ನು ಒಮ್ಮೆಯೇ ಹೊರ ಜಗತ್ತನ್ನು ಕಾಣಲು ಬಿಟ್ಟಂಥಹ ಅನುಭವ. ಖುಷಿ, ಭಯ, ಅಳುಕು, ಮುಜುಗರ ಎಲ್ಲಾ ಒಟ್ಟಿಗೆ ಬಂದಂತಿತ್ತು. ಹೊಸ ಜಾಗ ಹೊಸ ಜನ. ಎಲ್ಲಿ ನೋಡಿದರೂ ಗುರುತಿಲ್ಲದವರು. ಅಬ್ಬಾ.... ಬೆಂಗಳೂರು...... ಎಲ್ಲಿ ನೋಡಿದರು ಟ್ರಾಫಿಕ್. ನಾನು ಬೆಂಗಳೂರು ತಲುಪುವಾಗ ಬೆಳಗ್ಗೆ 5.45 ಆ ಹೊತ್ತಿಗೆಯೇ ನನಗೆ ಟ್ರಾಫಿಕ್ ನ ಅನುಭವ ಶುರುವಾಯಿತು. ಸೇರಬೇಕಾದ ಜಾಗ ಸೇರುವಾಗ ಗಂಟೆ ಎಂಟಾಗಿತ್ತು. <br /><br />ಕಾರ್ಯಕ್ರಮದ ಹಿಂದಿನ ದಿನವೇ ಬರಬೇಕೆಂಬ ಸಂದೇಶವಿತ್ತು. ಅದರಂತೆಯೇ ನಾನು ಬೇಗ ಹೋದೆ. ಉಳಿಯುವ ವ್ಯವಸ್ಥೆ ಸಿದ್ಧವಾಗಿತ್ತು. ಮೊದಲನೇಯ ದಿನಕ್ಕೆ ತಯಾರಾಗಲು ಅವಕಾಶ ಸಿಕ್ಕಿತು. ರಾತ್ರಿ ಊಟಕ್ಕೆ ಎಲ್ಲಿ ಹೋಗುವುದು ಎಂದಾಗ ಡಾ. ಪವನಜರು ಹಲವಾರು ಹೋಟೆಲ್ ಗಳ ಮಾಹಿತಿ ಕೊಟ್ಟರು. ಅಂತೂ ರಾಜಧಾನಿಗೆ ಹೋಗೋಣವೆಂದು ನಿರ್ಧರಿಸಿದೆ. ಆಹಾ... ಎಷ್ಟು ಚೆನ್ನಾಗಿದೆ ಊಟ ಎನ್ನಿಸಿತು. ಅಲ್ಲಿಯವರು ನಮ್ಮನ್ನು ಬರಮಾಡಿಕೊಂಡ ರೀತಿ ಬಹಳ ಚೆನ್ನಾಗಿತ್ತು. ತನ್ನ ಮನೆಯವರೇ ಬಂದಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು. ಊಟದ ಜೊತೆಗೆ ಅವರ ಅಥಿತಿ ಸತ್ಕಾರ, ಉಪಚಾರ ಮನಸ್ಸಿಗೆ ತೃಪ್ತಿಕೊಟ್ಟಿತು.<br /><br />ಅಂತೂ ಕಾರ್ಯಕ್ರಮದ ಮೊದಲನೆ ದಿನ ಬಂತು. ಬೆಳಗ್ಗೆ 6 ಗಂಟೆಗೆ ಎದ್ದುಬಿಟ್ಟೆ. ಪ್ರೆಸೆಂಟೇಶನ್ ತಯಾರು ಮಾಡುವಂತೆ ಸೂಚಿಸಲಾಗಿತ್ತು. ಅದನ್ನು ಡಾ. ಪವನಜರ ಸಹಾಯದಿಂದ ಮೊದಲೇ ರೆಡಿಮಾಡಿದ್ದೆ. ತಿಂಡಿ ಮುಗಿಸಿ ಆಫೀಸ್ ಗೆ ಹೊರೆಟೆವು. ಬೆಳಗ್ಗೆ 9.30ಗೆ ಕಾರ್ಯಕ್ರಮ ಶುರುವಾಯಿತು. ಭಾರತದ ಹಲವು ಪ್ರದೇಶದಿಂದಲ್ಲದೇ ನೇಪಾಳ ಹಾಗು ಶ್ರೀಲಂಕಾದಿಂದ ಸಹಾ ಭಾಗವಹಿಸುವವರಿದ್ದರು. ಎಲ್ಲರನ್ನು ಒಮ್ಮೆ ನೋಡಿದೆ ಎಲ್ಲಾ ಹೊಸ ಮುಖಗಳು. ಆದರೂ ಕೆಲವರ ಬಗ್ಗೆ ಕೇಳಿಪಟ್ಟಿದ್ದೆ. ಈ ಕಾರ್ಯಕ್ರಮವು ತನ್ವೀರ್ ಹಸನ್ ಹಾಗು ಟೀಟೋ ಇವರಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯಿತು.<br /><br />ಭಾಗವಹಿಸುವವರ ಪರಿಚಯ ಮಾಡಿಕೊಟ್ಟ ರೀತಿ ನನಗೆ ಬಹಳ ಸಂತೋಷಕೊಟ್ಟಿತು. ಸುಮಾರು 30 ಜನರು ನೆರೆದಿದ್ದರು. ನಮ್ಮೆಲ್ಲರನ್ನು ಗುಂಪುಗಳಾಗಿ ವಿಂಗಡಿಸಲಾಯಿತು. ನನ್ನ ಗುಂಪಿನಲ್ಲಿ ಇದ್ದವರು- ಪಂಜಾಬಿ ಹುಡುಗಿ ನಿತೇಶ್, ಶ್ರೀಲಂಕಾದ ಶಿವ, ಒರಿಸ್ಸಾದ ಶೈಲೇಶ್, ಕರ್ನಾಟದ ಗೋಪಾಲ್ ಕೃಷ್ಣ. ಇದೊಂದು ಒಳ್ಳೆಯ ಅನುಭವ ಎನಿಸಿತು. ಅವರ ಅನುಭವ ಕೇಳುವಾಗ ನಾನು ಸಹ ಹಾಗೆಯೇ ಇರಬೇಕು ಎಂದೆನಿಸಿತು. ಪ್ರೆಸೆಂಟೇಶನನ್ನು ಮೊದಲ ಗುಂಪಿನಿಂದ ಪ್ರಾರಂಭಿಸಲಾಯಿತು. ಗ್ಲೋಬಲ್ ಮಾಟ್ರಿಕ್ಸ್ ನ ಬಗ್ಗೆ ತಿಳಿಸಿದರು. ಮಧ್ಯಾಹ್ನದ ಊಟ ಬಹಳ ಅದ್ಭುತವಾಗಿತ್ತು. ಊಟದ ನಂತರ ಮತ್ತೆ ಕೆಲಸ ಮುಂದುವರೆಸಿದೆವು. ಸುಮಾರು 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು.<br /><br />ಎರಡನೆ ದಿನವು ಪ್ರೆಸೆಂಟೇಶನ್ ನೊಂದಿಗೆ ಕಾರ್ಯಕ್ರಮ ಶುರುವಾಯಿತು. ನಂತರ ಡಾ. ಪವನಜರ ಪ್ರೆಸೆಂಟೇಶನ್, ಒಳ್ಳೆಯ ಪ್ರೆಸೆಂಟೇಶನ್ ಹೇಗಿರಬೇಕು ಎಂದು ತಿಳಿಸಿದರು. ಉತ್ತಮ ಪ್ರೆಸೆಂಟೇಶನ್ ಮಾಡಲು ಬೇಕಾದ ಅಂಶಗಳನ್ನು ತಿಳಿದುಕೊಂಡೆ. ಅಭಿನವ್ ಹಾಗೂ ರೆಹಮಾನ್ ರವರು ಸರ್ವೆ ಇಮ್ಪಾಕ್ಟ್ ಬಗ್ಗೆ ಹೇಳಿದರು. ಒಂದು ಕಾರ್ಯಕ್ರಮ ನಡೆಸಬೇಕಾದರೆ ಅದಕ್ಕೆ ಮುಂಚೆಯೇ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟರು. ನಂತರ ಶುಭಾಷಿಶ್ ಹಾಗೂ ಪವನ್ ರ ಪ್ರೆಸೆಂಟೇಶನ್. ಯಾವುದೇ ಕಾರ್ಯಕ್ರಮ ನಡೆಸಿದ ನಂತರ ಅದರ ವರಿದಿಯನ್ನು ಹೇಗೆ ಮಾಡಬೇಕೆಂದು ತಿಳಿಸಿದರು. ಎಲ್ಲರು ಸಹಾ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಕೊನೆಯಲ್ಲಿ CISನ ಕಾರ್ಯನಿರ್ವಾಹಕ ನಿರ್ದೇಶಕರಾದ ಸುನಿಲ್ ಅವರ ಅನುಭವವನ್ನು ಹೇಳಿದರು.<br /><br />ಮೂರನೆಯ ದಿನ ಬಂತು. ಇದು TTT 2016ಯ ಕೊನೆಯ ದಿನವಾಗಿತ್ತು. ಅಂದು ನಾನು ಪ್ರೆಸೆಂಟೇಶನ್ ಮಾಡಬೇಕಾಗಿತ್ತು. ಮೊದಲ ಬಾರಿಗೆ ಮಾಡಿದ ಪ್ರೆಸೆಂಟೇಶನ್ ಆಗಿತ್ತು. ನಾನು ಬಹಳ ಹೆದರಿದ್ದೆ. ನನ್ನ ಗುಂಪಿನವರು ಹಾಗು ಅಲ್ಲಿದ್ದವರು ನನ್ನನ್ನು ಪ್ರೋತ್ಸಾಹಿಸಿದರು. ಹೇಗೋ ಪ್ರೆಸೆಂಟೇಶನ್ ಮುಗಿಸಿದೆ. ಒಂದು ಒಳ್ಳೆ ಅನುಭವ ಪಡೆದೆ. ನನ್ನ ಪ್ರೆಸೆಂಟೇಶನನ್ನು ಮೆಚ್ಚಿದರು. ಅದನ್ನು ಕೇಳಿ ಸಂತೋಷವಾಯಿತು, ಆದರೂ ಇನ್ನೂ ಚೆನ್ನಾಗಿ ಮಾಡಬಹುದು ಎನ್ನಿಸಿತು. ಮಧ್ಯಾಹ್ನದ ನಂತರ TTTಯಲ್ಲಿ ಭಾಗವಹಿಸಿದವರು ಹಾಗೂ MWTಯಲ್ಲಿ ಭಾಗವಹಿಸುವವರನ್ನು ಸೇರಿಸಿ ಗುಂಪು ಮಾಡಲಾಯಿತು. ನಮ್ಮ ವಿಕಿಪೀಡಿಯಗೆ ಯಾವ ವಿಷಯದಲ್ಲಿ ಬಲಾವಣೆ ಬೇಕಾಗಿದೆ ಎಂದು ಹುಡುಕಿ ಚರ್ಚಿಸಿದೆವು. ಇದರ ಬದಲಾವಣೆ ಮಾಡಲು ಸಲಹೆ ನೀಡಿದೆವು. ಕೊನೆಯಲ್ಲಿ ಎಲ್ಲರು ತಮ್ಮ ತಮ್ಮ ಅನುಭವವನ್ನು ಹೇಳಿಕೊಂಡರು. <br /><br />ದಿನದಿಂದ ದಿನಕ್ಕೆ ನಾನು ಹಲವಾರು ವಿಷಯಗಳನ್ನು ಕಲಿಯುತ್ತಾ ಸಾಗುತ್ತಿರುವೆ. ವಿಕಿಪೀಡಿಯದ ಜೊತೆಗೆ ವಿಕಿಸೋರ್ಸ್ ಹಾಗೂ ವಿಕಿಡಾಟದ ಬಗ್ಗೆ ತಿಳಿದುಕೊಂಡೆ. ಇಲ್ಲಿ ಕಲಿತ ಪ್ರತಿಯೊಂದು ವಿಷಯವು ನನಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಆಗೇ ಆಗುತ್ತದೆ. ಬಹಳ ಒಳ್ಳೆಯ ಅನುಭವವಾಯಿತು. ಇದನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಷ್ಟಕ್ಕೆ ನನ್ನ ಪ್ರಯಾಣನ್ನು ನಿಲ್ಲಿಸದೇ ಮುಂದುವರಿಸಬೇಕೆಂಬುದೆ ನನ್ನ ಆಸೆ.</p>
<hr />
<p style="text-align: justify; ">Link to the blogpost <a class="external-link" href="http://kanasinagombe.blogspot.in/2016/06/blog-post_34.html">here</a></p>
<p>
For more details visit <a href='http://editors.cis-india.org/a2k/blogs/ca4cb0cacca4cbf-caecbeca1cb2cc1-ca4cb0cacca4cbfc97c82ca1cbec97-cis-a2k-ttt-2016'>http://editors.cis-india.org/a2k/blogs/ca4cb0cacca4cbf-caecbeca1cb2cc1-ca4cb0cacca4cbfc97c82ca1cbec97-cis-a2k-ttt-2016</a>
</p>
No publisherDhanalakshmi K.T.CIS-A2KKannada WikipediaAccess to Knowledge2016-08-03T01:19:18ZBlog Entryಕನ್ನಡದ ಆನ್ಲೈನ್ ವಿಶ್ವಕೋಶ ದುರ್ಬಲ
http://editors.cis-india.org/news/vijaya-karnataka-kannada-wikipedia-november-19-2013
<b>An article about the tenth Kannada Wikipedia published in Vijaya Karnataka on November 19.</b>
<p style="text-align: justify; ">Read the article <a class="external-link" href="http://vijaykarnataka.indiatimes.com/articleshow/26001736.cms">published in Vijaya Karnataka</a> on November 19, 2013.</p>
<hr />
<p style="text-align: justify; "><span id="advenueINTEXT"><i>-ಕನ್ನಡ ವಿಕಿಪೀಡಿಯಕ್ಕೆ ಹತ್ತು, ಸೋದರ ಭಾಷೆಗಳ ಮುಂದೆ ಕನ್ನಡ ಹಿಂದೆ-</i><br /> <br /> <b>* ಎಸ್. ಕುಮಾರ್, ಬೆಂಗಳೂರು</b><br /> ಹತ್ತು ವರ್ಷಗಳಲ್ಲಿ ಬರಿ 14,202 ಲೇಖನಗಳು! ಇದು ಕನ್ನಡ ವಿಕಿಪೀಡಿಯದ ಸಾಧನೆ. ಕನ್ನಡದಲ್ಲಿ ಮಾಹಿತಿಯನ್ನು ಕಲೆಹಾಕುವ ಹುರುಪಿನೊಂದಿಗೆ ಆರಂಭವಾದ ಕನ್ನಡ ವಿಕಿಪೀಡಿಯಾ ಈಗ ದಕ್ಷಿಣ ಭಾರತದಲ್ಲಿ ಕೊನೆಯ ನಾಲ್ಕನೇ ಸ್ಥಾನದಲ್ಲಿದೆ.<br /> <br /> ಇಂಗ್ಲಿಷಿನ ಅತಿದೊಡ್ಡ ಆನ್ಲೈನ್ ವಿಶ್ವಕೋಶವಾಗಿ ಜನಪ್ರಿಯವಾದ ವಿಕಿಪೀಡಿಯಾ ಹತ್ತು ವರ್ಷಗಳ ಹಿಂದೆ ಭಾರತೀಯ ಭಾಷೆಗಳಲ್ಲೂ ವಿಶ್ವಕೋಶ ಆರಂಭಿಸಿತು. ಆದರೆ ಕನ್ನಡ ವಿಕಿಪೀಡಿಯಾ ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಇದು ಅತ್ಯಂತ ಬಡವಾಗಿರುವ ವಿಶ್ವಕೋಶವಾಗಿಯೇ ಉಳಿದಿದೆ. ತಮಿಳಿನ ವಿಕಿಪೀಡಿಯ 56 ಸಾವಿರ ಲೇಖನಗಳನ್ನು ಹೊಂದಿದ್ದರೆ, ತೆಲುಗು 53 ಸಾವಿರ ಲೇಖನಗಳನ್ನು ಹೊಂದಿದೆ. ಮಲಯಾಳಂ, ಮರಾಠಿ ಭಾಷೆಗಳು ಕನ್ನಡ ವಿಕಿಪೀಡಿಯಾಕ್ಕಿಂತ ಹೆಚ್ಚಿನ ಅಂದರೆ 40 ಸಾರ ಲೇಖನಗಳನ್ನು ಒಳಗೊಂಡಿವೆ. ಭಾರತೀಯ ಭಾಷೆಗಳ ಪೈಕಿ ಅತಿಹೆಚ್ಚು ಲೇಖನಗಳನ್ನು ಹೊಂದಿರುವು ಹಿಂದಿ ಭಾಷೆಯ ವಿಕಿಪೀಡಿಯ. ಸುಮಾರು ಒಂದು ಲಕ್ಷ ಲೇಖನಗಳನ್ನು ಹೊಂದಿದ್ದು, ಅತ್ಯಂತ ಕ್ರಿಯಾಶೀಲವಾಗಿ ಸಂಪಾದನೆಗೊಳ್ಳುತ್ತದೆ.<br /> <br /> ಸಾರ್ವಜನಿಕರೇ ಇದಕ್ಕೆ ಮಾಹಿತಿಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಸಂಪಾದಿಸಬಹುದು. ಕೆಲವು ಆಸಕ್ತರು ಜತೆಗೂಡಿ ವಿಕಿಪೀಡಿಯಾಗಳನ್ನು ಕಲೆಹಾಕುತ್ತಿದ್ದಾರೆ. ಸದ್ಯ ಕನ್ನಡ ವಿಕಿಪೀಡಿಯಾಕ್ಕೆ 400 ಒಟ್ಟು ಸಂಪಾದಕರಿದ್ದಾರೆ. ಈ ಪೈಕಿ 41 ಮಂದಿ ಮಾತ್ರ ಸಕ್ರಿಯರು. ತಿಂಗಳಿಗೆ 2000 ಸಾರ ಲೇಖನಗಳು ಸಂಪಾದನೆಯಾಗುತ್ತವೆ. ಆದರೆ ಸೇರ್ಪಡೆಯ ಪ್ರಮಾಣ ಕಡಿಮೆ. ಇಷ್ಟಾಗಿಯೂ ಕನ್ನಡ ವಿಕಿಪೀಡಿಯಾಕ್ಕೆ ತಿಂಗಳಿಗೆ 14 ಲಕ್ಷ ಭೇಟಿಗಳಿವೆ.<br /> <br /> ವಿಕಿಪೀಡಿ ತಂಡದಿಂದ ವಿಶ್ವಕೋಶವನ್ನು ಲೇಖನಗಳಿಂದ ಸಮೃದ್ಧಗೊಳಿಸುವ ನಡೆದಿದೆ. ಆದರೆ ಅದಕ್ಕೆ ಸಿಕ್ಕಪ್ರತಿಕ್ರಿಯೆ ನಿರಾಶೆ ಹುಟ್ಟಿಸುವಂಥದ್ದು. ಕಳೆದ ಮಾರ್ಚ್ ನಿಂದ ಮತ್ತೆ ಅಭಿಯಾನ ಆರಂಭವಾಗಿದ್ದು ಆಸಕ್ತರನ್ನು ಸಂಪಾದಕರನ್ನಾಗಿ ಮಾಡುವ ಪ್ರೇರೇಪಿಸುವ ಕೆಲಸವನ್ನು ತಂಡ ಮಾಡುತ್ತಿದೆ.<br /> <br /> ಸಾಫ್ಟ್ವೇರ್ ವಲಯದ ಮಂದಿ ಒಂದಿಷ್ಟು ಸಮಯವನ್ನು ಇದಕ್ಕೆ ನೀಡುತ್ತಾರೆ ಹೊರತು, ಸಾಹಿತಿಗಳು, ಉಪನ್ಯಾಸಕರು, ವಿವಿಧ ಕ್ಷೇತ್ರಗಳ ತಜ್ಞರು ಆಸಕ್ತಿ ತೋರುವುದಿಲ್ಲ ಎನ್ನುತ್ತದೆ ಕನ್ನಡ ವಿಕಿಪೀಡಿಯ ತಂಡ. ಕನ್ನಡ ಬ್ಲಾಗ್ ಬರಹಗಾರರು ಒಂದಿಷ್ಟು ಆಸಕ್ತಿ ತೋರಿದರೂ ಲೇಖನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಪ್ರಕಟಿತ ಲೇಖನಗಳನ್ನು ಇಲ್ಲಿ ಪ್ರಕಟಿಸಬಹುದು.ಅದಕ್ಕೂ ಆಸಕ್ತಿ ತೋರುವುದಿಲ್ಲ ಎನ್ನುತ್ತದೆ ತಂಡ.<br /> <br /> <b>ಕನ್ನಡಿಗರ ನಿರಾಸಕ್ತಿ</b><br /> ಕನ್ನಡ ವಿಕಿಪೀಡಿಯದ ಹಿರಿಯ ಸಂಪಾದಕರಲ್ಲಿ ಒಬ್ಬರಾದ ಯು ಬಿ ಪವನಜ ಅವರು ''ಕನ್ನಡಿಗರಿಗೆ ವಿಕಿಪೀಡಿಯ ಬಗ್ಗೆ ನಿರಾಸಕ್ತಿ ಇದೆ ಎನ್ನುತ್ತಾರೆ. ಕನ್ನಡ ಸಾಹಿತಿಗಳಾದರೂ ಅಷ್ಟೆ. ಕನ್ನಡ ಭಾಷೆಯ ಬೆಳವಣಿಗೆ ಅಂದರೆ ಬರೀ ಸಾಹಿತ್ಯದ ಬಗ್ಗೆ ಮಾತಾನಾಡುವುದು ಎನ್ನುವ ಭಾವನೆ ಬೆಳೆಸಿಕೊಂಡಿದ್ದಾರೆ. ಅದರಾಚೆಗೂ ಕನ್ನಡ ಬೆಳೆಯಬೇಕಿದೆ. ಆಗ ಮಾತ್ರ ಭಾಷೆ ಜೀವಂತವಾಗುತ್ತದೆ,'' ಎನ್ನುತ್ತಾರೆ.<br /> <br /> ''ಆರಂಭ ಹಂತದಲ್ಲಿ ತಂಡದಲ್ಲಿದ್ದ ಗುಂಪುಗಾರಿಕೆ ಮತ್ತು ಹೆಚ್ಚುಗಾರಿಕೆಯೇ ಕನ್ನಡ ವಿಶ್ವಕೋಶ ವಿಕಿಪೀಡಿಯ ಬಡವಾಗಲೂ ಕಾರಣ,'' ಎಂದು ತಂಡದ ಸದಸ್ಯರೊಬ್ಬರು ಹೇಳುತ್ತಾರೆ.<br /> <br /> ನಮಗೆ ಗೊತ್ತಿರುವುದನ್ನು ಬರೆಯುತ್ತೇವೆ ಎಂಬ ಭಾವನೆಯಿಂದ ಕೂಡಿದ್ದ ತಂಡ ಇನ್ನೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದದ್ದು ವಿಕಿಪೀಡಿಯಕ್ಕೆ ಹರಿದು ಬರಬಹುದಿದ್ದ ಲೇಖನಗಳ ಪ್ರಮಾಣವನ್ನು ತಗ್ಗಿಸಿತೇನೊ ಎಂದು ಅವರು ಅನುಮಾನ ವ್ಯಕ್ತಪಡಿಸುತ್ತಾರೆ.<br /> <br /> <b>ಅತಿ ಹಿರಿಯ ಸಂಪಾದಕರು</b><br /> ಎಚ್ ಆರ್ ಲಕ್ಷ್ಮಿ ವೆಂಕಟೇಶ್, ಮುಂಬಯಿ<br /> ಬಿ ಎಸ್ ಚಂದ್ರಶೇಖರ್, ಸಾಗರ<br /> <br /> <b>ಅತಿ ಕಿರಿಯ ಸಂಪಾದಕ</b><br /> ಯಜ್ಞೇಶ್, 9ನೇ ವಿದ್ಯಾರ್ಥಿ, ಮೈಸೂರು<br /> -----<br /> <br /> <i>ಕನ್ನಡ ವಿಕಿಪೀಡಿಯ ಮಾಹಿತಿ ಸಮಗ್ರವಾಗಿರುವುದಿಲ್ಲ. ಇರುವ ಮಾಹಿತಿ ಕೂಡ ತಪ್ಪಿನಿಂದ ಕೂಡಿದೆ. ವಾಕ್ಯರಚನೆ ಸರಿ ಇಲ್ಲ. ಕನ್ನಡ ವಿಕಿಪೀಡಿಯಾ ಇದ್ದೂ ಇಲ್ಲದಂತೆ.</i><br /> <b>* ಎಚ್ ಎಂ ನಿರಂಜನ, ಇಂಗ್ಲಿಷ್ ಉಪನ್ಯಾಸಕರು, ಹೊಸಪೇಟೆ</b><br /> <br /> <i>ವಿಕಿಪೀಡಿಯ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಬರಹಗಾರರಿಗೆ ಈ ಬಗ್ಗೆ ತಾಂತ್ರಿಕ ಮಾಹಿತಿ ಇಲ್ಲ. ಹೀಗಾಗಿ ಸಮೃದ್ಧವಾಗಿ ಬೆಳೆಯಬಹುದಾಗಿದ್ದ ವಿಕಿಪೀಡಿಯ ಸೊರಗಿದೆ. ಈಗ ಮಾಹಿತಿ ನೀಡುವ ಪ್ರಯತ್ನ ನಡೆಯುತ್ತಿದೆ.</i><br /> <b>* ಟಿ. ಜಿ. ಶ್ರೀನಿಧಿ, ವಿಕಿಪೀಡಿಯ ಸಂಪಾದಕ</b></span></p>
<p>
For more details visit <a href='http://editors.cis-india.org/news/vijaya-karnataka-kannada-wikipedia-november-19-2013'>http://editors.cis-india.org/news/vijaya-karnataka-kannada-wikipedia-november-19-2013</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2013-11-20T07:30:24ZNews Itemಕನ್ನಡಕ್ಕೆ ಬಲಕೊಡುವ ಕೆಲಸವಾಗಲಿ’
http://editors.cis-india.org/news/vijay-karnataka-march-2-2014-wikipedia-workshop-coverage
<b>Dr. U.B. Pavanaja conducted a 2-day workshop-cum-editathon at Sagara on March 1 and 2, 2014. Vijaya Karnataka published a report on March 2. </b>
<hr />
<p style="text-align: justify; ">Read the original <a class="external-link" href="http://vijaykarnataka.indiatimes.com/articleshow/31232084.cms">published in Vijaya Karnataka</a> on March 2.</p>
<hr />
<p style="text-align: justify; ">ಸಾಗರ: ಆಯಾ ಕಾಲಘಟ್ಟದ ಸಮಸ್ಯೆ ಗಳಿಗೆ ಭಾಷೆ ಸ್ಪಂದಿಸಬೇಕು. ಎಲ್ಲ ಕಾಲ ಕ್ಕಿಂತಲೂ ಹೆಚ್ಚಿನ ಸಮಸ್ಯೆಗಳನ್ನು ಇಂದು ಪ್ರಾದೇಶಿಕ ಭಾಷೆಗಳು ಎದುರಿಸುತ್ತಿವೆ. ಸಾಂಸ್ಕೃತಿಕ, ಜಾಗತಿಕ ಸವಾಲುಗಳಿವೆ. ಆದ್ದರಿಂದ ಕನ್ನಡಕ್ಕೆ ಬಲಕೊಡುವ ಕೆಲಸ ಆಗಬೇಕೆಂದು ಬರಹಗಾರ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.</p>
<p style="text-align: justify; ">ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ತನ್ನ ಮೊದಲ ವಾರ್ಷಿಕೋತ್ಸವದ ಅಂಗ ವಾಗಿ ಬಿ.ವಿ.ರವೀಂದ್ರನಾಥ್ ಚಾರ್ಟ ರ್ಡ್ ಅಕೌಂಟೆಂಟ್ ಕಚೇರಿಯಲ್ಲಿ ಕನ್ನಡ ವಿಕಿಪೀಡಿಯ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ ಸಹ ಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ವಿಕಿಪೀಡಿಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>
<p style="text-align: justify; ">ತಂತ್ರಜ್ಞಾನಕ್ಕೆ ಕನ್ನಡ ಒಗ್ಗಿಸುವ ಕೆಲಸ ಅತ್ಯಂತ ಕಷ್ಟವಾದುದು. ಭಾಷೆಯನ್ನು, ಭಾವವನ್ನು ಕಟ್ಟಿಕೊಡುವ ಕೆಲಸ ತಂತ್ರಜ್ಞಾನ ಮಾಡಬಲ್ಲದು. ಜಗತ್ತಿನ ಆಗುಹೋಗುಗಳನ್ನು ಕನ್ನಡ ಭಾಷೆ ಮೂಲಕ ಅರ್ಥಮಾಡಿಕೊಳ್ಳುವ ಯತ್ನ ಆಗಬೇಕಾಗಿದೆ. ಜೀವ ವೈವಿಧ್ಯ ಕಾಪಾಡು ವಂತೆ ಭಾಷಾ ವೈವಿಧ್ಯ ಕಾಪಾಡಬೇಕು. ಸರಕಾರದ ಜಾಲತಾಣಗಳು ಕನ್ನಡದಲ್ಲೇ ಇರಬೇಕೆಂಬ ಆದೇಶ ಇದುವರೆಗೂ ಅನುಷ್ಠಾನಗೊಂಡಿಲ್ಲ. ಕೇರಳದಲ್ಲಿ ತಂತ್ರಜ್ಞಾನದಲ್ಲಿ ತಮಿಳು ಭಾಷೆ ಕುರಿತು 2011ರಲ್ಲಿ ರಾಜ್ಯಮಟ್ಟದ ಚರ್ಚೆಯಾಗಿ 140 ಪ್ರಬಂಧಗಳ ಮಂಡನೆ ಮಾಡಲಾ ಗಿತ್ತು. ಭಾಷೆಯನ್ನು ಸಮಕಾಲೀನಗೊಳಿ ಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಕನ್ನಡ ವಿಕಿಪೀಡಿಯದ ಕನ್ನಡದ ಕೆಲಸವನ್ನು ಕನ್ನಡಿಗರು ಬೆಂಬಲಿಸ ಬೇಕೆಂದರು.</p>
<p style="text-align: justify; ">ಆಶಯ ಮಾತನಾಡಿದ ಕನ್ನಡ ತಂತ್ರಾಂಶ ಪಂಡಿತ ಡಾ.ಯು.ಬಿ.ಪವನಜ ಮಾತನಾಡಿ, ಮೂಲತಃ ಹವಾಯಿ ಭಾಷೆಯ ಪದವಾಗಿರುವ ವಿಕಿ ಅಂದರೆ ವೇಗ ಎಂದು ಅರ್ಥ. ವೇಗವಾಗಿ ಮಾಹಿತಿ ನೀಡಬಲ್ಲ ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ. ಎಲ್ಲರ ಜ್ಞಾನವನ್ನೂ ಒಟ್ಟುಗೂಡಿಸಿ, ಅದು ಪ್ರತಿಯೊಬ್ಬರಿಗೂ ಮುಕ್ತವಾಗಿ ದೊರೆಯುವಂತಾಗ ಬೇಕೆಂಬುದು ವಿಕಿಪೀಡಿಯ ಉದ್ದೇಶ ವಾಗಿದೆ ಎಂದರು. ತಾ.ಪಂ. ಸದಸ್ಯೆ ಜ್ಯೋತಿ ಮಾತನಾಡಿದರು. ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಗೌರವ ಸಲಹೆಗಾರ ಬಿ.ವಿ.ರವೀಂದ್ರ ನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಜಿ.ಟಿ.ಶ್ರೀಧರ ಶರ್ಮ, ಚಿನ್ಮಯ ಎಂ.ರಾವ್ ಹೊನಗೋಡು, ಬಿ.ಜಿ.ಮಂಜಪ್ಪ, ವಿದ್ಯಾಧರ ಚಿಪ್ಪಳಿ, ಗಣಪತಿ ಕಾನಗೋಡು, ಬಿ.ಎಸ್.ಚಂದ್ರಶೇಖರ ಹಾಜರಿದ್ದರು. ಸಹನಾ ಜಿ.ಭಟ್ ಪ್ರಾರ್ಥಿಸಿ, ಸತ್ಯನಾರಾಯಣಭಟ್ ಸ್ವಾಗತಿಸಿ, ವೈಶಾಲಿ ವಂದಿಸಿದರು.ಅರುಣ್ ಘಾಟೆ ನಿರೂಪಿಸಿದರು.</p>
<p>
For more details visit <a href='http://editors.cis-india.org/news/vijay-karnataka-march-2-2014-wikipedia-workshop-coverage'>http://editors.cis-india.org/news/vijay-karnataka-march-2-2014-wikipedia-workshop-coverage</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2014-03-05T11:33:03ZNews Itemಕನ್ನಡ ವಿಶ್ವಕೋಶದ ಆರು ಸಂಪುಟ ವಿಕಿಪೀಡಿಯಾಗೆ
http://editors.cis-india.org/news/udayavani-july-15-2014-mysore-university-event-coverage-in-udayavani
<b>ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮತ್ತೂಂದು ಹಿರಿಮೆಯ ಗರಿ</b>
<p style="text-align: justify; ">Read the original <a class="external-link" href="http://www.udayavani.com/news/503154L15-%E0%B2%95%E0%B2%A8-%E0%B2%A8%E0%B2%A1-%E0%B2%B5-%E0%B2%B6-%E0%B2%B5%E0%B2%95-%E0%B2%B6%E0%B2%A6-%E0%B2%86%E0%B2%B0--%E0%B2%B8-%E0%B2%AA-%E0%B2%9F-%E0%B2%B5-%E0%B2%95-%E0%B2%AA-%E0%B2%A1-%E0%B2%AF-%E0%B2%97-.html">published in Udayavani</a> on July 15, 2014 here.</p>
<hr />
<p style="text-align: justify; ">ಶತಮಾನದ ಹೊಸ್ತಿಲಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮತ್ತೂಂದು ಹಿರಿಮೆಯ ಗರಿ ಮೂಡಿದೆ. ದೇಶದಲ್ಲೇ ಮೊದಲ ಬಾರಿಗೆ ಮೈಸೂರು ವಿವಿ ಮೂರು ದಶಕಗಳಷ್ಟು ಹಳೆಯದಾದ ಕನ್ನಡ ವಿಶ್ವಕೋಶದ ಆರು ಸಂಪುಟಗಳನ್ನು ವಿಕಿಪೀಡಿಯಾಗೆ ಸಮರ್ಪಣೆ ಮಾಡಿದೆ.</p>
<p style="text-align: justify; ">ಪಾರಂಪರಿಕ ವಿವಿಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯವು ಹಲವಾರು ವಿದ್ವಾಂಸರ ಅವಿರತ ಶ್ರಮದಿಂದ ರೂಪುಗೊಂಡಿರುವ ವಿಶ್ವಕೋಶಗಳು ವಿಕಿಪಿಡಿಯಾದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ ಮೂರು ದಶಕಗಳಷ್ಟು ಹಳೆಯ ಕನ್ನಡ ವಿಶ್ವಕೋಶದ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಗಣಕೀರಣಗೊಳಿಸಿ ವಿಕಿಪಿಡಿಯಾಗೆ ಬಿಡುಗಡೆಗೊಳಿಸಲಾಗಿದೆ. ವಿಶ್ವಕೋಶ ಪರಿವರ್ತನೆ ಯೋಜಯಾದ ಚಿಜಿಠಿ.ly/ಞysಟ್ಟಛಿunಜಿಡಿಟ ಅನ್ನು ಮಂಗಳವಾರ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಭವನದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ .ಕೆ.ಎಸ್. ರಂಗಪ್ಪ ಲೋಕಾರ್ಪಣೆ ಮಾಡಿದರು.</p>
<p style="text-align: justify; "><b>ಈಡೇರಿದ ಯೋಜನೆ:</b> ಬಳಿಕ ಅವರು ಮಾತನಾಡಿ, ಮೈಸೂರು ವಿವಿಯಲ್ಲಿ ಉತ್ಕಷ್ಟವಾದ ಪ್ರೌಢ ಪ್ರಬಂಧಗಳಿದ್ದು ಅವುಗಳೆಲ್ಲ ಜನರಿಗೆ ತಲುಪಬೇಕೆಂಬ ನಮ್ಮ ಅಭಿಲಾಷೆಗೆ ಪೂರಕವಾಗಿ ಈ ಯೋಜನೆ ಈಡೇರಿದೆ. ನಮ್ಮ ವಿವಿಯಲ್ಲಿ ವಿಶ್ವಕೋಶದ 14 ಸಂಪುಟಗಳಿದ್ದು ಈಗ 6 ಸಂಪುಟಗಳು ವಿಕಿಪೀಡಿಯಾಗೆ ಬಿಡುಗಡೆಗೊಳಿಸಲಾಗಿದೆ. ವಿಷಯ ವಿಶ್ವಕೋಶದ 30 ಸಂಪುಟಗಳಿದ್ದು 5 ಸಂಪುಟಗಳನ್ನು ಮಾರ್ಪಡಿಸಲಾಗಿದೆ ಎಂದು ತಿಳಿಸಿದರು.</p>
<p style="text-align: justify; ">ಯಾರೂ ಮಾಹಿತಿ ನೀಡಬಹುದು: ವಿಶ್ವಕೋಶ ಪರಿವರ್ತನಾ ಯೋಜನೆಯ ರೂವಾರಿ ಡಾ. ಯು.ಬಿ. ಪವನಜ ಮಾತನಾಡಿ, ವಿಕಿಫೀಡಿಯಾದಲ್ಲಿ ಇದುವರೆಗೆ ಪ್ರಪಂಚದ 287 ಭಾಷೆಗಳು ಅಳವಡಿಕೆಯಾಗಿದ್ದು ಇವುಗಳಲ್ಲಿ ಭಾರತದ 20 ಭಾಷೆಗಳು ಸ್ಥಾನ ಪಡೆದುಕೊಂಡಿವೆ. ಮುಕ್ತವಾಗಿ, ಸ್ವತಂತ್ರ ವಿವಿ ಎಂದೆ ಕರೆಯುವ ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿ ತುಂಬಬಹುದು. ಆದರೆ, ಕಾಪಿರೈಟ್ ಆಕ್ಟ್ನಡಿ ಬರುವ ಲೇಖನಗಳನ್ನು ಬಳಸುವಂತಿಲ್ಲ. ಅದಕ್ಕಾಗಿಯೇ ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಲಭ್ಯವಿದ್ದು, ಇದರ ಸಹಾಯದಿಂದ ಮಾಹಿತಿ ಒದಗಿಸಬಹುದು ಎಂದರು.</p>
<p style="text-align: justify; ">ಇದೇ ವೇಳೆ ಮೈಸೂರು ವಿವಿಯ ವಿಶ್ವಕೋಶವನ್ನು ವಿಕಿಪೀಡಿಯಾಗೆ ಅಳವಡಿಸಲು ಶ್ರಮಿಸಿದ ಬೆಂಗಳೂರಿನ ಕ್ರೈಸ್ತ ವಿವಿಯ ವಿದ್ಯಾರ್ಥಿಗಳಾದ ಕೋಮಲ್, ಗೀತಾ, ಗೌತಮ್, ಪ್ರತಾಪ್, ಭರತ್, ಸ್ಮಿತಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಆರ್. ರಾಮಕಷ್ಣ, ಮೈಸೂರು ವಿವಿ ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ. ಎಸ್. ರವಿ, ಕ್ರಿಯೇಟಿವ್ ಕಾಮನ್ಸ್ನ ತೇಜಸ್ ಜೈನ್ ಇತರರಿದ್ದರು.</p>
<p style="text-align: justify; "><b>14ರಲ್ಲಿ 6 ಸಂಪುಟ ಸಮರ್ಪಣೆ</b></p>
<p style="text-align: justify; ">ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ್ ಮಾದರಿಯಲ್ಲಿ ಮೈಸೂರು ವಿವಿಯಲ್ಲಿ 1954ರಲ್ಲಿ ವಿಶ್ವಕೋಶ ರಚಿಸುವ ಪ್ರಯತ್ನ ಆರಂಭವಾಯಿತು. 1968ರ ವರೆಗೆ ಈ ಯೋಜನೆಯು ಸಾಹಿತ್ಯ ಮತ್ತು ಸಂಸ್ಕತಿ ಅಭಿವದ್ಧಿ ಇಲಾಖೆಯ ಅಧೀನದಲ್ಲಿತ್ತು. ನಾಡೋಜ ಡಾ.ದೇಜವರೇಗೌಡ ಅವರು ಮೈಸೂರು ವಿವಿಯ ಕುಲಪತಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ವಿವಿಯ ವಶಕ್ಕೆ ವಹಿಸಲಾಯಿತು. ಇದುವರೆಗೆ ಒಟ್ಟು ಕನ್ನಡ ವಿಶ್ವಕೋಶದ 14 ಸಂಪುಟಗಳನ್ನು ಹೊರತರಲಾಗಿದ್ದು, 30 ವಿಷಯ ವಿಶ್ವಕೋಶಗಳಿವೆ. ಇದೀಗ ಅವುಗಳಲ್ಲಿ 6 ಸಂಪುಟಗಳನ್ನು ವಿಕಿಪೀಡಿಯಾಗೆ ಸಮರ್ಪಿಸಲಾಗಿದೆ.</p>
<p>
For more details visit <a href='http://editors.cis-india.org/news/udayavani-july-15-2014-mysore-university-event-coverage-in-udayavani'>http://editors.cis-india.org/news/udayavani-july-15-2014-mysore-university-event-coverage-in-udayavani</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2014-07-18T05:11:41ZNews Itemಕನ್ನಡ ವಿಕಿಪೀಡಿಯಕ್ಕೆ ದಶಮಾನೋತ್ಸವ ಸಂಭ್ರಮ
http://editors.cis-india.org/news/tenth-anniversary-kannada-wikipedia-prajavani-coverage-november-18
<b>A report of the Kannada Wikipedia tenth anniversary celebrations in Prajavani on November 18.</b>
<div class="field-label-hidden field-type-text-with-summary field-name-body field" style="text-align: justify; ">
<div class="field-items">
<div class="even field-item">
<p><a class="external-link" href="http://www.prajavani.net/article/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF%E0%B2%95%E0%B3%8D%E0%B2%95%E0%B3%86-%E0%B2%A6%E0%B2%B6%E0%B2%AE%E0%B2%BE%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%B8%E0%B2%82%E0%B2%AD%E0%B3%8D%E0%B2%B0%E0%B2%AE">Read the online version published in Prajavani here</a>.</p>
<hr />
<p><b>ಬೆಂಗಳೂರು:</b> ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ ಸಂಭ್ರಮ. ಬಸವನಗುಡಿ ನ್ಯಾಷನಲ್ ಕಾಲೇಜು ಡಾ.ಎಚ್.ನರಸಿಂಹಯ್ಯ ಸಭಾಂಗಣ ದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.</p>
<p>ವಿಕಿಪೀಡಿಯ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಬಹುಭಾಷೆಗಳಲ್ಲಿ ಲಭ್ಯ ಇದೆ. 2001ರಲ್ಲಿ ವಿಕಿಪೀಡಿಯಾ ಆರಂಭವಾಯಿತು. ಕನ್ನಡ ವಿಕಿಪೀ ಡಿಯಾ ಆರಂಭವಾದುದು 2003 ರಲ್ಲಿ. ಪ್ರಸ್ತುತ ಕನ್ನಡ ಆವೃತ್ತಿಯು 15,369 ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. ಇಂಗ್ಲಿಷ್ ವಿಕಿಪೀಡಿಯಾದಲ್ಲಿ 44 ಲಕ್ಷ ವಿಷಯ ಗಳಿವೆ. ಹಿಂದಿಯಲ್ಲಿ 1 ಲಕ್ಷ, ತೆಲುಗು ವಿನಲ್ಲಿ 53,900, ತಮಿಳುನ ಭಾಷೆ ಯಲ್ಲಿ 56,000, ಮಲಯಾಳಂನಲ್ಲಿ 25,000 ವಿಷಯಗಳಿವೆ.</p>
<p>ಇಂಗ್ಲಿಷ್ನಲ್ಲಿ 80,000 ಸಂಪಾ ದಕರು ಇದ್ದರೆ, ಕನ್ನಡದಲ್ಲಿ ಇರುವುದು 403 ಮಂದಿ. ಅದರಲ್ಲಿ ಸಕ್ರಿಯರಾ ಗಿರುವವರು 40 ಮಂದಿ.<br /> ಕನ್ನಡ ವಿಕಿಪೀಡಿಯಾದಲ್ಲಿ 2004 ರ ವರೆಗೂ ಒಂದೇ ಲೇಖನ ಇತ್ತು. 2004ರ ಅಂತ್ಯದಲ್ಲಿ ಲೇಖನಗಳ ಸಂಖ್ಯೆ 176ಕ್ಕೆ, 2005ರಲ್ಲಿ 515ಕ್ಕೆ ತಲುಪಿತು. 2006ರ ಜೂನ್ನಲ್ಲಿ 1,000 ಲೇಖನ ಗಡಿ ದಾಟಿತು. ಬಳಿಕ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು. ಮತ್ತೆ ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಪ್ರಗತಿ ಕುಂಠಿತವಾಗಿದೆ.</p>
<p>‘ಮುಂಬೈಯಲ್ಲಿ ನೆಲೆಸಿರುವ ಎಚ್.ಆರ್.ಲಕ್ಷ್ಮಿ ವೆಂಕಟೇಶ ಅವರು 10,000 ವಿಷಯಗಳನ್ನು ಹಾಗೂ ಬಿ.ಎಸ್.ಚಂದ್ರಶೇಖರ್ ಅವರು 4,000 ವಿಷಯಗಳನ್ನು ಪರಿಷ್ಕರಣೆ ಮಾಡಿದ್ದಾರೆ. ಇಬ್ಬರೂ 80 ವರ್ಷದ ಆಸುಪಾಸಿನವರು. ಇಂತಹ ಉತ್ಸಾಹ ಇತರರಲ್ಲಿ ಮೂಡಿದರೆ ಕನ್ನಡದಲ್ಲಿ ವಿಷಯಗಳ ಸಂಖ್ಯೆ ಜಾಸ್ತಿ ಆಗಲಿದೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನ ಒದಗಿಸದಿದ್ದರೆ ಕನ್ನಡ ಭಾಷೆ ಉಳಿ ಯಲ್ಲ’ ಎನ್ನುತ್ತಾರೆ ವಿಕಿಪೀಡಿಯಾ ಸಂಪಾದಕರಲ್ಲಿ ಒಬ್ಬರಾದ ಯು.ಬಿ.ಪವನಜ.</p>
<p>‘ಕನ್ನಡದ ಬಗ್ಗೆ ವಿಚಾರಸಂಕಿರಣ, ಕವಿಗೋಷ್ಠಿಗಳನ್ನು ನಡೆಸಿದರೆ ಕನ್ನಡ ಭಾಷೆ ಉಳಿಯುತ್ತದೆ ಎಂಬ ಭ್ರಮೆ ಬಿಡಬೇಕು. ಕನ್ನಡ ಸಾಹಿತಿಗಳು ವಿಕಿ ಪೀಡಿಯಾದಲ್ಲಿ ಮಾಹಿತಿ ಸೇರಿಸಲು ತಂತ್ರಜ್ಞಾನದ ಅರಿವಿಲ್ಲವೆಂದು ಮೌನ ವಾಗುವುದು ಸರಿಯಲ್ಲ’ ಎಂದರು.<br /> ದಶಮಾನೋತ್ಸವ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ, ಸಂವಾದ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.</p>
</div>
</div>
</div>
<p>
For more details visit <a href='http://editors.cis-india.org/news/tenth-anniversary-kannada-wikipedia-prajavani-coverage-november-18'>http://editors.cis-india.org/news/tenth-anniversary-kannada-wikipedia-prajavani-coverage-november-18</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2013-11-20T07:34:14ZNews Itemಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಅದರ ಪ್ರಯುಕ್ತ ಒಂದು ಆಚರಣೆ
http://editors.cis-india.org/news/avadhi-website-november-16-2013-kannada-wikipedia-10-years-celebration
<b>Coverage of the ten years of celebrations in Kannada Wikipedia on Avadhi website.</b>
<p style="text-align: justify; ">ಸ್ಥಳ: ಎಚ್.ಎನ್. ಮಲ್ಟಿಮೀಡಿಯ ಹಾಲ್, ನ್ಯಾಶನಲ್ ಕಾಲೇಜು, ಬಸವನಗುಡಿ</p>
<p style="text-align: justify; ">ದಿನಾಂಕ: ನವಂಬರ್ ೧೭, ೨೦೧೩</p>
<p style="text-align: justify; ">ಸಮಯ: ೦೯:೩೦ ರಿಂದ ೧೩:೦೦</p>
<p style="text-align: justify; "><b>ಕಾರ್ಯಕ್ರಮ ವಿವರ :</b></p>
<p style="text-align: justify; ">೯:೩೦-೧೦:೦೦ ನೋಂದಣಿ</p>
<p style="text-align: justify; ">೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ</p>
<p style="text-align: justify; ">ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ</p>
<p style="text-align: justify; ">ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ</p>
<p style="text-align: justify; ">ಪ್ರಸ್ತಾವನೆ – ಡಾ. ಯು. ಬಿ. ಪವನಜ</p>
<p style="text-align: justify; ">ಮುಖ್ಯ ಅತಿಥಿಗಳ ಮಾತು</p>
<p style="text-align: justify; ">ಡಾ. ಯು. ಆರ್. ಅನಂತಮೂರ್ತಿ</p>
<p style="text-align: justify; ">ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ</p>
<p style="text-align: justify; ">ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ</p>
<p style="text-align: justify; ">ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು</p>
<p style="text-align: justify; ">ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ</p>
<p style="text-align: justify; ">ಧನ್ಯವಾದ ಸಮರ್ಪಣೆ</p>
<p style="text-align: justify; ">೧೧:೦೦ – ೧೧:೧೫ – ಚಹಾ</p>
<p style="text-align: justify; ">೧೧:೧೫-೧೨:೦೦</p>
<p style="text-align: justify; ">ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ – ಓಂಶಿವಪ್ರಕಾಶ</p>
<p style="text-align: justify; ">ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ</p>
<p style="text-align: justify; ">ವಿಕಿಪೀಡಿಯನ್ನರುಗಳ ಮಾತು</p>
<p style="text-align: justify; ">೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)</p>
<p style="text-align: justify; ">ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.</p>
<p style="text-align: justify; ">ಎಲ್ಲರೂ ಬರುತ್ತೀರಿ ತಾನೆ? ಹಾಗೆಯೇ ಸಾಧ್ಯವಿದ್ದವರು ಲ್ಯಾಪ್ಟಾಪ್, ಇಂಟರ್ನೆಟ್</p>
<p style="text-align: justify; ">ಡಾಂಗಲ್ ಮತ್ತು ಒಂದು ಸಿದ್ಧಪಡಿಸಿದ ಲೇಖನ ತಂದು ಕೊನೆಯ ಸಂಪಾದನೋತ್ಸವದಲ್ಲಿ</p>
<p style="text-align: justify; ">ಪಾಲ್ಗೊಳ್ಳಬೇಕಾಗಿ ವಿನಂತಿ.</p>
<p style="text-align: justify; ">ಬರುವವರು ದಯವಿಟ್ಟು ಈ ಪುಟದಲ್ಲಿ ನೋಂದಾಯಿಸಿಕೊಳ್ಳಿ -</p>
<p style="text-align: justify; ">https://kn.wikipedia.org/wiki/ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ</p>
<p>
For more details visit <a href='http://editors.cis-india.org/news/avadhi-website-november-16-2013-kannada-wikipedia-10-years-celebration'>http://editors.cis-india.org/news/avadhi-website-november-16-2013-kannada-wikipedia-10-years-celebration</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2013-11-20T08:58:30ZNews Itemಕನ್ನಡ ವಿಕಿಪೀಡಿಯಗೆ 10, ಬೆಳವಣಿಗೆ ಸಾಲದು : ಪ್ರೊ .ಜಿವಿ
http://editors.cis-india.org/news/one-india-november-17-2013-kannada-wikipedia-10th-anniversary-celebration-basavanagudi
<b>A post-event report of the program published in OneindiaKannada on November 17, 2013.</b>
<p style="text-align: justify; ">Read about the event <a class="external-link" href="http://kannada.oneindia.in/news/bangalore/kannada-wikipedia-10th-anniversary-celebration-basavanagudi-079349.html">published in Oneindia Kannada on November 17 here</a>.</p>
<hr />
<p style="text-align: justify; ">ಬೆಂಗಳೂರು, ನ.17: ಕನ್ನಡ ನೆಟ್ಟಿಗರ ಜ್ಞಾನದಾಹವನ್ನು ತಣಿಸುತ್ತಿರುವ ಕನ್ನಡ ವಿಕಿಪೀಡಿಯ 10 ವಸಂತಗಳನ್ನು ಪೂರೈಸಿರುವ ಸಂತಸವನ್ನು ನವೆಂಬರ್ 17 ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್ ನರಸಿಂಹಯ್ಯ ಸಭಾಂಗಣದಲ್ಲಿ ಹಂಚಿಕೊಳ್ಳಲಾಯಿತು.</p>
<p style="text-align: justify; ">ದಶಮಾನೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿದ್ದ ಡಾ. ಯುಆರ್ ಅನಂತಮೂರ್ತಿ ಹಾಗೂ ರವಿ ಹೆಗಡೆ ಅವರು ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಮತ್ತೊಬ್ಬ ಮುಖ್ಯ ಅತಿಥಿಗಳಾದ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಸಭೆಯನ್ನು ಉದ್ದೇಶಿಸಿ ಹೀಗೆ ಮಾತನಾಡಿದರು :</p>
<p style="text-align: justify; ">'ಕನ್ನಡ ವಿಕಿಪೀಡಿಯದ ಬೆಳವಣಿಗೆ ಸಾಲದು. ನಾಡಿನ ಯುವ ಜನತೆ ಮತ್ತಷ್ಟು ಉತ್ಸುಕರಾಗಿ ಲೇಖನಗಳನ್ನು ಸೇರಿಸಿ ಕನ್ನಡ ವಿಕಿಪೀಡಿಯವನ್ನು ಮಾಹಿತಿಯೋಗ್ಯ ತಾಣವಾಗಿ ಮಾರ್ಪಡಿಸಿ' ಎಂದು ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಯುವಜನತೆಗೆ ಕರೆ ನೀಡಿದರು.</p>
<p style="text-align: justify; ">ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು, 'ಕನ್ನಡ ವಿಕಿಪೀಡಿಯವನ್ನು ಹತ್ತು ಪೂರೈಸಿದ ಮಾತ್ರಕ್ಕೆ ವಿಕಿಪೀಡಿಯ ಮುಂದುವರೆಯುತ್ತದೆ ಎನ್ನುವ ಭಾವನೆ ಬೇಡ. ಪ್ರೀತಿಯಿಂದ ಕಟ್ಟಿದ ಒಂದು ಸಂಸ್ಥೆ ಮುಂದುವರೆಯಬೇಕಾದರೆ ಅದಕ್ಕೆ ಬಹಳಷ್ಟು ಜನರ ಸಹಕಾರ ಬೇಕು. ಈ ಸಹಕಾರ ಈಗ ಕನ್ನಡ ವಿಕಿಪೀಡಿಯಕ್ಕೆ ಅಗತ್ಯವಿದೆ. ನನಗೆ ಈಗಾಗಲೇ ನೂರು ವರ್ಷವಾಗಿದೆ. ಆದರೂ ನನ್ನಿಂದಾಗುವ ಸಹಾಯವನ್ನು ನೀಡಲು ಸಿದ್ದ. ಕನ್ನಡ ವಿಕಿಪೀಡಿಯಕ್ಕೆ ನನ್ನ ಬೆಂಬಲ ಯಾವತ್ತೂ ನಿರಂತರ' ಎಂದರು.</p>
<table class="plain">
<tbody>
<tr>
<th><img src="http://editors.cis-india.org/home-images/copy_of_TenYears.png" alt="Ten Years" class="image-inline" title="Ten Years" /></th>
</tr>
</tbody>
</table>
<p style="text-align: justify; ">ಇಂದು ಇಂಟರ್ನೆಟ್ನಲ್ಲಿ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸಾವಿರಾರು ಮಾಹಿತಿಗಳು ಸಿಗುತ್ತದೆ.ಇವುಗಳಲ್ಲಿ ನಿಖರವಾಗಿರುವ ಮಾಹಿತಿ ಎಲ್ಲಾ ತಾಣಗಳಲ್ಲಿ ಸಿಗುವುದು ಕಷ್ಟ. ಹೀಗಾಗಿ ಅಯಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡದ ಸಾಧಕರು ತಮ್ಮ ಕರ್ತವ್ಯವೆಂದು ಭಾವಿಸಿ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕು' ಎಂದು ವಿಜ್ಞಾನಿ ಅನಂತರಾಮು ಅಭಿಪ್ರಾಯಪಟ್ಟರು.</p>
<p style="text-align: justify; ">ಕನ್ನಡ ವಿಕಿಪೀಡಿಯದ ಸಂಪಾದಕ ಯು.ಬಿ. ಪವನಜ ಮಾತನಾಡಿ, 'ಪೆಟ್ರೋಲ್ ಉಳಿಸಲು ಕಡಿಮೆ ಪೆಟ್ರೋಲ್ ಬಳಸಿ ಎಂದು ಹೇಳುತ್ತೇವೆ. ಆದರೆ ಕನ್ನಡ ಉಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಆದರೆ ವಿಶ್ವದ ಮಾಹಿತಿಗಳು ನಮ್ಮ ಭಾಷೆಯಲ್ಲಿ ಸಿಕ್ಕಿದಾಗ ಮಾತ್ರ ಕನ್ನಡ ಉಳಿಸಬಹುದು. ಕಥೆ, ಕವನ ಇತ್ಯಾದಿ ಸಾಹಿತ್ಯದ ಜೊತೆಗೆ ಈಗ ಮಾಹಿತಿ ಸಾಹಿತ್ಯವನ್ನು ಬರೆಯುವ ಮಾಹಿತಿ ಸಾಹಿತಿಗಳ ಅಗತ್ಯವಿದೆ. ಈ ಸಾಹಿತಿಗಳಿಗೆ ವಿಕಿಪೀಡಿಯ ಒಂದು ಉತ್ತಮ ವೇದಿಕೆ.ಈ ವೇದಿಕೆಯನ್ನು ಬಳಸಿ ಕನ್ನಡ ವಿಕಿಪೀಡಿಯವನ್ನು ಉತ್ತಮ ಮಾಹಿತಿ ಕೋಶವನ್ನಾಗಿ ರೂಪಿಸಬೇಕಾಗಿದೆ' ಎಂದು ಹೇಳಿದರು.</p>
<p style="text-align: justify; ">ನಿರ್ದೇಶಕ <a href="http://kannada.oneindia.in/topic/abhay-simha" title="Topic: ಅಭಯ್ ಸಿಂಹ">ಅಭಯ್ ಸಿಂಹ</a> ಮಾತನಾಡಿ. 'ನನ್ನ ಅಜ್ಜ ಜಿ.ಟಿ ನಾರಾಯಣರಾಯರು ಬರೆದಿರುವ ವಿಜ್ಞಾನಕ್ಕೆ ಸಂಬಂಧಿಸಿ ಬರೆದಿರುವ ಲೇಖನಗಳು ಕ್ರಿಯೆಟಿವ್ ಕಾಮನ್ಸ್ ಲೈಸನ್ಸ್ನಿಂದಾಗಿ ವಿಕಿಪೀಡಿಯದಲ್ಲಿ ಲಭ್ಯವಾಗಿದೆ.ಈ ಲೈಸನ್ಸ್ ಮೂಲಕ ಈಗಾಗಲೇ ಮುದ್ರಣಗೊಂಡಿರುವ ಮತ್ತಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸೇರುವಂತಾಗಬೇಕು' ಎಂದು ಆಶಿಸಿದರು.</p>
<p style="text-align: justify; ">ಕಾರ್ಯಕ್ರಮದಲ್ಲಿ ವಿಕಿಪೀಡಿಯದಲ್ಲಿ ಅತಿ ಹೆಚ್ಚಾಗಿ ಲೇಖನಗಳನ್ನು ಸಂಪಾದನೆ ಮಾಡಿದ ಲೇಖಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ವಿಕಿಪೀಡಿಯಕ್ಕೆ ಹೊಸ ಲೇಖನ ಸೇರಿಸುವ ಬಗ್ಗೆ ಓಂ ಶಿವಪ್ರಕಾಶ ಪ್ರಾತ್ಯಕ್ಷಿಕೆ ನೀಡಿದರು. ಕ್ರಿಯೇಟಿವ್ ಕಾಮನ್ಸ್ ವಿಚಾರದ ಬಗ್ಗೆ ಕಿರಣ್ ರವಿಕುಮಾರ ಉಪನ್ಯಾಸ ನೀಡಿದರು.</p>
<div class="mobile_content_text" style="text-align: justify; ">ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು <a href="http://www.facebook.com/oneindiakannada" target="_blank">Facebook</a> ಮತ್ತು <a href="http://www.twitter.com/oneindiakannada" target="_blank">Twitter</a> ಮೇಲೆ ಇರಲಿ ಕಣ್ಣು.</div>
<p>
For more details visit <a href='http://editors.cis-india.org/news/one-india-november-17-2013-kannada-wikipedia-10th-anniversary-celebration-basavanagudi'>http://editors.cis-india.org/news/one-india-november-17-2013-kannada-wikipedia-10th-anniversary-celebration-basavanagudi</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2013-11-20T08:54:46ZNews Itemಅಂತರ್ಜಾಲದಲ್ಲಿ ನೆಟ್ಟ ಸಸಿಗೆ ಈಗ ಹತ್ತು ವರ್ಷ
http://editors.cis-india.org/openness/blog-old/kannada-prabha-november-1-2013-dr-ub-pavanaja-10-years-of-kannada-wikipedia
<b>Dr. U.B. Pavanaja wrote an article highlighting 10 years of Kannada Wikipedia. Kannada Wikipedia started in the year 2003 and now it has completed 10 years. The article highlights the current status of the Kannada Wikipedia vis-a-vis number of articles, number of editors, active editors, and page views per month. </b>
<hr />
<p style="text-align: justify; ">Read the original article <a class="external-link" href="http://www.kannadaprabha.com/top-news/%E0%B2%85%E0%B2%82%E0%B2%A4%E0%B2%B0%E0%B3%8D%E0%B2%9C%E0%B2%BE%E0%B2%B2%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B3%86%E0%B2%9F%E0%B3%8D%E0%B2%9F-%E0%B2%B8%E0%B2%B8%E0%B2%BF%E0%B2%97%E0%B3%86-%E0%B2%88%E0%B2%97-%E0%B2%B9%E0%B2%A4%E0%B3%8D%E0%B2%A4%E0%B3%81-%E0%B2%B5%E0%B2%B0%E0%B3%8D%E0%B2%B7/130695.html">published in Kannada Prabha</a> on November 1, 2013. For downloading the article (PDF), <a href="http://editors.cis-india.org/openness/blog-old/kannad-wikipedia-10-years.pdf" class="internal-link">click here</a>.</p>
<hr />
<p style="text-align: justify; "><span id="ctl00_ContentPlaceHolder1_lbltitle">ಕನ್ನಡದ ಮುಕ್ತ ಜ್ಞಾನಕೋಶವಾದ ವಿಕಿಪೀಡಿಯ ಈಗ ಜನಪ್ರಿಯ</span></p>
<p style="text-align: justify; "><span id="ctl00_ContentPlaceHolder1_lblDetailNews1">ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ನವೆಂಬರ್ ಕೂಡ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವೆಂಬರ್ಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ.</span></p>
<p style="text-align: justify; "><span id="ctl00_ContentPlaceHolder1_lblDetailNews1">ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು. ಕನ್ನಡ ಉಳಿಸಬೇಕಾದರೆ...?' ಎಂಬ ಮಾತು ಪ್ರತಿ ನವೆಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ ಒಂದು ಜೋಕ್. ಕನ್ನಡ ಉಳಿಯಬೇಕಾದರೆ ಕನ್ನಡ ಬಳಸಬೇಕು. ಇದು ಎಲ್ಲರೂ ಒಪ್ಪುವ ಮಾತು. ಕನ್ನಡ ಬಳಸುವುದೆಂದರೆ ನಿತ್ಯದ ವ್ಯವಹಾರಗಳಲ್ಲಿ ಕನ್ನಡ ಬಳಸುವುದು. ಕನ್ನಡ ಭಾಷೆಯ ಶ್ರೀಮಂತಿಗೆ ಬಗ್ಗೆ ಭಾಷಣ ಬಿಗಿದು ಮೇಜು ಕುಟ್ಟುವುದರಿಂದ ಕನ್ನಡ ಉಳಿಯುವುದಿಲ್ಲ. ಅದು ಉಳಿಯಬೇಕಾದರೆ ಜನಸಾಮಾನ್ಯರು ಅದನ್ನು ಬಳಸಬೇಕು. ಜನಸಾಮಾನ್ಯರಿಗೆ ಪ್ರಮುಖವಾಗಿ ಬೇಕಾಗಿರುವುದು ಸಾಹಿತಿಗಳು ಬೆನ್ನು ತಟ್ಟಿಕೊಳ್ಳುವ ಸೃಜನಶೀಲ (ಕಥನ) ಸಾಹಿತ್ಯವಲ್ಲ. ಅದು ಬೇಡ ಎಂದಲ್ಲ. ಆದರೆ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದುದು ಮಾಹಿತಿ ಸಾಹಿತ್ಯ. ಒಬ್ಬಾತನಿಗೆ ಹೊಚ್ಚಹೊಸ ನಮೂನೆಯ ಪ್ಲಾಸ್ಮಾ, ಎಲ್ಸಿಡಿ ಅಥವಾ ಎಲ್ಇಡಿ ಟಿವಿ ಖರೀದಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಆತನಿಗೆ ಇವುಗಳ ವ್ಯತ್ಯಾಸ ಗೊತ್ತಿರಬೇಕು. ತನ್ನ ಅಗತ್ಯ ಮತ್ತು ಇತಿಮಿತಿಯೊಳಗೆ ಯಾವುದು ಉತ್ತಮ ಎಂದು ತಿಳಿಯಬೇಕು. ಆತ ಇದನ್ನು ಕನ್ನಡದಲ್ಲಿ ತಿಳಿಯುವ ಬಗೆ ಹೇಗೆ? ಇದಕ್ಕೆ ಬೇಕು ಒಂದು ವಿಶ್ವಕೋಶ.</span></p>
<p style="text-align: justify; "><span>ಈಗ ಇನ್ನೊಂದು ವಿಷಯದ ಕಡೆ ಗಮನ ಹರಿಸೋಣ. ಈಗ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳಿಗೆ ಪ್ರಪಂಚ ಜ್ಞಾನ ದೊರೆಯುವುದಿಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತೇವೆ ಎಂದು ಹೆಚ್ಚಿನ ತಂದೆತಾಯಂದಿರು ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನದ ಲಭ್ಯತೆ ತುಂಬಾ ಕಡಿಮೆ ಎಂಬುದನ್ನು ನಾವು ಒಪ್ಪಲೇಬೇಕು. ಆದರೆ ಈ ಸಮಸ್ಯೆಗೆ ಪರಿಹಾರ ಇಂಗ್ಲಿಷ್ ಭಾಷೆಗೆ ಮೊರೆಹೋಗುವುದಲ್ಲ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವುದು. ಈ ರೀತಿ ಮಾಡಲು ಸಹಾಯ ಮಾಡುವುದು ಅತಿ ಜನಪ್ರಿಯವಾಗಿರುವ ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಕನ್ನಡ ವಿಕಿಪೀಡಿಯ.</span></p>
<p style="text-align: justify; "><span>ವಿಕಿಪೀಡಿಯ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ. ಇದು 2001ರಲ್ಲಿ ಪ್ರಾರಂಭವಾಯಿತು. ಇದು ಜಗತ್ತಿನ 286 ಭಾಷೆಗಳಲ್ಲಿದೆ. ಇನ್ನೂ ಸುಮಾರು 300 ಭಾಷೆಯ ವಿಕಿಪೀಡಿಯಗಳು ತಯಾರಿ ಹಂತದಲ್ಲಿವೆ. ಸುಮಾರು 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯ. ಅದರಲ್ಲಿ ಕನ್ನಡವೂ ಸೇರಿದೆ. ಭಾರತೀಯ ಭಾಷೆಯ ವಿಕಿಪೀಡಿಯಗಳಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ ವಿಕಿಪೀಡಿಯಗಳು ಕನ್ನಡಕ್ಕಿಂತ ಅಂಕಿ ಅಂಶಗಳಲ್ಲಿ ಮುಂದಿವೆ. ಕನ್ನಡ ವಿಕಿಪೀಡಿಯ 2003ರಲ್ಲಿ ಪ್ರಾರಂಭವಾಯಿತು. ಅಂದರೆ ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ.</span></p>
<p style="text-align: justify; "><span>ಎಲ್ಲ ವಿಕಿಪೀಡಿಯಗಳಂತೆ ಕನ್ನಡ ವಿಕಿಪೀಡಿಯವೂ ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು. ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ. ನೀವು ಲೇಖನ ಬರೆದು ಪುಟ ಉಳಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಲೇಖನ ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾಗುತ್ತದೆ. ಪ್ರಪಂಚದಾದ್ಯಂತ ಹಬ್ಬಿರುವ ಕನ್ನಡಿಗರಿಗೆ ಅದು ಕ್ಷಣಮಾತ್ರದಲ್ಲಿ ದೊರೆಯುವಂತಾಗುತ್ತದೆ.</span></p>
<p style="text-align: justify; "><span>ವಿಕಿಪೀಡಿಯ ಆದಾಯರಹಿತ (ನಾನ್ ಪ್ರಾಫಿಟ್) ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರ್ಕಾರಿ ಸಂಸ್ಥೆಯಲ್ಲ, ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನೂ ಪಡೆಯುತ್ತಿಲ್ಲ. ಈ ಯೋಜನೆಗೆ ಅವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರ್ಕಾರಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಕೂಡ ಧನಸಹಾಯ ನೀಡಲು ಮುಂದಾಗಿವೆ.</span></p>
<p style="text-align: justify; "><span>ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವುದಕ್ಕೆ ನಾವು ತಜ್ಞರೇ ಆಗಿರಬೇಕು ಎನ್ನುವುದು ತಪ್ಪು. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.</span></p>
<p style="text-align: justify; "><span>ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ. ಆದ್ದರಿಂದ ಇಂದೇ ಕೀಲಿಮಣೆ ಮೇಲೆ ಕುಟ್ಟಿ -- kn.wikipedia.org.</span></p>
<p>
For more details visit <a href='http://editors.cis-india.org/openness/blog-old/kannada-prabha-november-1-2013-dr-ub-pavanaja-10-years-of-kannada-wikipedia'>http://editors.cis-india.org/openness/blog-old/kannada-prabha-november-1-2013-dr-ub-pavanaja-10-years-of-kannada-wikipedia</a>
</p>
No publisherpavanajaAccess to KnowledgeWikimediaWikipediaOpennessKannada Wikipedia2013-11-20T09:55:31ZBlog EntryAn Article on Kannada Wikipedian H R Lakshmivenkatesh
http://editors.cis-india.org/news/an-article-on-kannada-wikipedian-hr-lakshmivenkatesh
<b>Karnataka Sangha Mumbai published an article on Kannada Wikipedian H.R.Lakshmivenkatesh in its March 2014 edition.</b>
<p>Dr. U.B. Pavanaja was instrumental in highlighting this fact and making people of Mumbai come to know about this. <span>The article <a class="external-link" href="http://www.karnatakasanghamumbai.com/Images/2014/Samb-March-2014.pdf">can be downloaded here</a>.<br /></span></p>
<p>
For more details visit <a href='http://editors.cis-india.org/news/an-article-on-kannada-wikipedian-hr-lakshmivenkatesh'>http://editors.cis-india.org/news/an-article-on-kannada-wikipedian-hr-lakshmivenkatesh</a>
</p>
No publisherpraskrishnaAccess to KnowledgeWikimediaWikipediaOpennessKannada Wikipedia2014-07-03T08:28:04ZNews ItemAn Article on Kannada Wikipedia
http://editors.cis-india.org/a2k/blogs/yojana-november-2014-pavanaja-article-on-kannada-wikipedia
<b>I wrote an article on Kannada Wikipedia which was published in the Yojana magazine on November 2014 issue.</b>
<table class="listing">
<tbody>
<tr>
<th><img src="http://editors.cis-india.org/home-images/YojanaNov2014.png" alt="Yojana" class="image-inline" title="Yojana" /></th>
</tr>
</tbody>
</table>
<p>
For more details visit <a href='http://editors.cis-india.org/a2k/blogs/yojana-november-2014-pavanaja-article-on-kannada-wikipedia'>http://editors.cis-india.org/a2k/blogs/yojana-november-2014-pavanaja-article-on-kannada-wikipedia</a>
</p>
No publisherpavanajaAccess to KnowledgeWikimediaWikipediaOpennessKannada Wikipedia2014-12-05T01:22:53ZBlog EntryA Kannada Wikipedia Workshop in Mysore
http://editors.cis-india.org/openness/blog-old/kannada-wikipedia-university-of-mysore
<b>On Tuesday, August 6, 2013, a day-long Kannada Wikipedia workshop was conducted at the Centre for Proficiency Development and Placement Services (CPDPS), Manasa Gangotri campus, University of Mysore, Karnataka by the Centre for Internet and Society's Access to Knowledge (CIS-A2K) team. Dr. U.B.Pavanaja conducted the workshop.</b>
<p style="text-align: justify; ">The main objective of this workshop was to acquaint the participants about Wikipedia and get them a hands-on experience of editing Wikipedia and also encourage them to contribute to the <a href="http://en.wikipedia.org/wiki/Kannada_language">Kannada Wikipedia</a>. The participants were also asked to reflect upon their experiences and perceptions of editing and contributing to Wikipedia, and identify areas in which they could add more value to the existing initiatives.</p>
<p style="text-align: justify; ">Most of the previous Kannada Wikipedia workshops have been well covered well by the leading Kannada newspapers like Vijaya Karnataka, Prajavani, etc.</p>
<p style="text-align: justify; ">This generated quite some interest in many people and we began getting requests to conduct more Kannada Wikipedia workshops. One such request came from <a class="external-link" href="http://www.uni-mysore.ac.in/centre-for-proficiency-development-and-placement-services-cpdps/">Prof. Niranjana Vanalli</a>, Director of <a class="external-link" href="http://www.uni-mysore.ac.in/centre-for-proficiency-development-and-placement-services-cpdps/">CPDPS</a>, to conduct a <a class="external-link" href="http://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F">Kannada Wikipedia</a> workshop at his centre. The date was finalised for August 6, 2013. This was announced in the leading local newspapers. As a result, nearly 50 persons registered for the workshop.</p>
<p><img src="http://editors.cis-india.org/openness/blog-old/KannadaWikipediaWorkshopMysoreAug062013022.jpg/image_preview" alt="Kannada Wikipedia workshop CPDPS Mysore" class="image-inline image-inline" title="Kannada Wikipedia workshop CPDPS Mysore" /></p>
<p><i>Above: Dr. Pavanaja conducting the workshop in Mysore</i></p>
<p style="text-align: justify; ">The workshop was inaugurated by Dr. P. Nagabhushan, Chairman of Computer Studies, <a href="http://www.uni-mysore.ac.in/computer-science/#A">Dept. of Studies in Computer Science</a>, University of Mysore. He said that Wikipedia could facilitate the growth of Kannada language in this digital era. Prof. Niranjana Vanalli welcomed everyone and also did the role of MC for the inaugural program. The workshop was scheduled to begin at 10 a.m. started about half an hour late. Initially there were 22 people and as the day progressed we saw more people joining in for the workshop. In the end there were about 60 participants. Dr. Pavanaja spoke briefly and requested Mysore University to re-release their famous Kannada Encyclopaedia under the <a href="http://creativecommons.org/licenses/">Creative Commons license</a> so as to facilitate the growth of Kannada Wikipedia.</p>
<p style="text-align: justify; ">The inauguration programme was very well covered by<a href="http://www.thehindu.com/todays-paper/tp-national/tp-karnataka/we-need-more-kannada-content-in-wikipedia/article4998269.ece"> media</a>. T<a href="http://www.thehindu.com/todays-paper/tp-national/tp-karnataka/divest-books-of-copyrights/article4998274.ece">he Hindu highlighted</a> my request about releasing encyclopaedias under the Creative Commons license.</p>
<p style="text-align: justify; ">After the inauguration, all those who were interested in the hands-on session shifted to the computer lab in the same building. Dr. Pavanaja gave a presentation on Wikipedia, then Kannada Wikipedia, and then spoke about its importance. This was followed by some demos on using Wikipedia and editing Wikipedia. The participants created their usernames in Kannada Wikipedia. Very soon the limit of creating 6 new editors per IP address was reached and the remaining people could not create their usernames. Some participants registered using Dr. Pavanaja’s laptop. The rest of the participants watched the demos and promised to go home and register later. Many people did so and have e-mailed their usernames.</p>
<p style="text-align: justify; "><a href="http://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Kiranravikumar">Kiran Ravikumar</a>, a young active Wikipedian from Mysore gave a brief presentation about <a href="http://creativecommons.org/">Creative Commons</a> and how to use it with Wikipedia. He demonstrated uploading some image under <a href="http://commons.wikimedia.org">Wikimedia Commons</a> and linking it from Wikipedia.</p>
<p><img src="http://editors.cis-india.org/openness/blog-old/KannadaWikipediaWorkshopMysoreAug062013043.jpg/image_preview" alt="Kiran Ravikumar" class="image-inline image-inline" title="Kiran Ravikumar" /></p>
<p><i>Above: Wikipedian Kiran Ravikumar making his presentation</i></p>
<p style="text-align: justify; ">Some new editors have begun doing wiki editing. We may need to monitor, and nurture these new editors till the time they become well versed.</p>
<p><i>We would like to thank Prof. Niranjana Vanalli for all the local arrangements, publicity and and making the workshop to happen</i>.</p>
<p>
For more details visit <a href='http://editors.cis-india.org/openness/blog-old/kannada-wikipedia-university-of-mysore'>http://editors.cis-india.org/openness/blog-old/kannada-wikipedia-university-of-mysore</a>
</p>
No publisherpavanajaAccess to KnowledgeWikimediaWikipediaOpennessKannada Wikipedia2013-10-04T04:40:46ZBlog Entry